
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾ. ಘಟಕದ ವತಿಯಿಂದ ಪತ್ರಕರ್ತರಿಗೆ ಹಾಗೂ ಮನೆಯವರಿಗೆ ಕ್ರೀಡಾಕೂಟವು ಮೇ. 15ರಂದು ಸುಳ್ಯದ ಪ್ರೆಸ್ಕ್ಲಬ್ ಆವರಣದಲ್ಲಿ ನಡೆಯಿತು.
ಪ್ರೆಸ್ಕ್ಲಬ್ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಪತ್ರಕರ್ತರಿಗೆ ಹಾಗೂ ಅವರ ಮನೆಯವರಿಗೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ನಡೆಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾ. ಘಟಕದ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಭವಾನಿ ಎ.ಜಿ. ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.









ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಪ್ರೆಸ್ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ, ಶ್ರೀನಿಧಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಕೃಷ್ಣ ಕಾಯರ್ತೋಡಿ ಗೌರವ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ನಿರ್ದೇಶಕ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ವಂದಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾ. ಘಟಕದ ಕಾರ್ಯದರ್ಶಿ ಗಣೇಶ್ ಕುಕ್ಕುದಡಿ ಬಹುಮಾನಿತರ ಪಟ್ಟಿ ವಾಚಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾ. ಘಟಕದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಕಜೆಮೂಲೆ, ಭಾಗೀಶ್ ಕೆ.ಟಿ. ಸಹಕರಿಸಿದರು.
ಸ್ಪರ್ಧಾ ವಿಜೇತರು
ಮಹಿಳೆಯರ ವಿಭಾಗ :
ಶಟ್ಲ್ ಬ್ಯಾಡ್ಮಿಂಟನ್ : ಜಯಶ್ರೀ ಕೊಯಿಂಗೋಡಿ ಮತ್ತು ಪವಿತ್ರ ಪ್ರಥಮ, ಪ್ರಜ್ಞಾ ಎಸ್.ನಾರಾಯಣ ಅಚ್ರಪ್ಪಾಡಿ ಮತ್ತು ಪೂಜಾಶ್ರೀ ಪೈಚಾರ್ ದ್ವಿತೀಯ, ಹಗ್ಗಜಗ್ಗಾಟ: ಪೂಜಾಶ್ರೀ ಮತ್ತು ತಂಡ ಪ್ರಥಮ, ಜಯಶ್ರೀ ಕೊಯಿಂಗೋಡಿ ಮತ್ತು ತಂಡ ದ್ವಿತೀಯ,ಶಾಟ್ಪುಟ್ ಪೂಜಾಶ್ರೀ ಪೈಚಾರ್ ಪ್ರಥಮ, ಪವಿತ್ರ ದ್ವಿತೀಯ, ನಿಧಾನ ಬೈಕ್ ರೇಸ್ : ಪ್ರಜ್ಞಾ ಎಸ್.ನಾರಾಯಣ ಅಚ್ರಪ್ಪಾಡಿ ಪ್ರಥಮ, ರಮ್ಯ ಸತೀಶ್ ಕಳಂಜ ದ್ವಿತೀಯ, ವೇಗದ ನಡಿಗೆ : ಚೈತ್ರಾ ಮುಳ್ಯ ಪ್ರಥಮ, ಚರಿಷ್ಮಾ ದೇರುಮಜಲು ದ್ವಿತೀಯ
ಪುರುಷರ ವಿಭಾಗ :
ಶಟ್ಲ್ ಬ್ಯಾಡ್ಮಿಂಟನ್ : ಅನಿಲ್ ಕಳಂಜ ಮತ್ತು ಶಿವಪ್ರಸಾದ್ ಕೇರ್ಪಳ ಪ್ರಥಮ, ಶರೀಫ್ ಜಟ್ಟಿಪಳ್ಳ ಮತ್ತು ಕೌಶಿಕ್ ದ್ವಿತೀಯ, ಹಗ್ಗಜಗ್ಗಾಟ: ಅನಿಲ್ ಕಳಂಜ ಮತ್ತು ತಂಡ ಪ್ರಥಮ, ಶ್ರೀಧರ್ ಕಜೆಗದ್ದೆ ಮತ್ತು ತಂಡ ದ್ವಿತೀಯ, ಶಾಟ್ಪುಟ್ ಅನಿಲ್ ಸಂಪ ಪ್ರಥಮ, ಶಿವರಾಮ ಕಜೆಮೂಲೆ ದ್ವಿತೀಯ, ನಿಧಾನ ಬೈಕ್ ರೇಸ್ : ಈಶ್ವರ್ ವಾರಣಾಸಿ ಪ್ರಥಮ, ಅನಿಲ್ ಕಳಂಜ ದ್ವಿತೀಯ, ವೇಗದ ನಡಿಗೆ : ಯಶ್ವಿತ್ ಕಾಳಂಮನೆ ಪ್ರಥಮ, ಈಶ್ವರ್ ವಾರಣಾಸಿ, ಶಿವರಾಮ ಕಜೆಮೂಲೆ ದ್ವಿತೀಯ,
ಮಕ್ಕಳ ವಿಭಾಗ :
೧೦೦ ಮೀ. ಓಟ : ಕೃತಿಕ್ ಪ್ರಥಮ, ಅಹದ್ ದ್ವಿತೀಯ, ಲಕ್ಕಿಗೇಮ್ : ಕೃತಿಕ್ ಪ್ರಥಮ, ಅಹದ್ ದ್ವಿತೀಯ








































