ಜಾಲ್ಸೂರು: ಮುರಳೀಧರ ಕೆಮನಬಳ್ಳಿಯವರ ತೋಟಕ್ಕೆ ಆನೆ ದಾಳಿ- ಅಪಾರ ಕೃಷಿ ಹಾನಿ

0


ಜಾಲ್ಸೂರು ಗ್ರಾಮದ ಕೆಮನಬಳ್ಳಿ ಮುರಳೀಧರರವರ ತೋಟಕ್ಕೆ ಆನೆಯೊಂದು ಕಳೆದ ಮೂರು ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದ್ದು, ಅಪಾರ ಕೃಷಿಯನ್ನು ನಾಶಪಡಿಸಿದೆ.


ಜೂ. 26, 27, 28 ರಂದು ಸತತವಾಗಿ ಮೂರು ದಿನಗಳಿಂದ ಕೆಮನಬಳ್ಳಿ ಮುರಳೀಧರರವರ ತೋಟಕ್ಕೆ ದಾಳಿ ನಡೆಸಿದ ಅನೆ ಸುಮಾರು 5೦ಕ್ಕೂ ಹೆಚ್ಚು ಅಡಿಕೆ ಮರಗಳು, ತೆಂಗು ಹಾಗೂ ಬಾಳೆಗಿಡಗಳನ್ನು ಪುಡಿಗೈದು ಹಾನಿಯುಂಟು ಮಾಡಿದೆ ಎಂದು ತಿಳಿದು ಬಂದಿದೆ. ಕೆಲವು ತಿಂಗಳುಗಳಿಂದ ಜಾಲ್ಸೂರು ಕನಕಮಜಲು ಪರಿಸರದಲ್ಲಿ ಆನೆಗಳ ಉಪಟಳ ಜಾಸ್ತಿಯಾಗಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಕೃಷಿ ಹಾನಿಯನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.