
ಅರಂತೋಡು ಗ್ರಾಮದ ಬಾಜಿನಡ್ಕ ಎಂಬಲ್ಲಿ ಅಶ್ವಥ್ ರವರ ತೋಟಕ್ಕೆ ಜು.4 ರಂದು ರಾತ್ರಿ ಆನೆ ದಾಳಿ ನಡೆಸಿ, 140 ಬಾಳೆ , 5 ತೆಂಗು ಸೇರಿದಂತೆ ಅಪಾರ ಕೃಷಿ ಹಾನಿ ನಡೆಸಿದೆ.


ಇದರೊಂದಿಗೆ ದೇವಕಿ, ವಿಜಯ ಕುಮಾರ್, ವಾಸುದೇವ, ರಾಮಯ್ಯ, ಭಾಸ್ಕರ, ಆನಂದ, ಯತೀಶ್ ರವರ ತೋಟಕ್ಕೆ ಕೂಡ ಹಾನಿ ನಡೆಸಿದ್ದು, ಅರಣ್ಯ ಇಲಾಖೆ
ಈ ಕಡೆ ಗಮನಹರಿಸಿ ಶಾಶ್ವತ ಪರಿಹಾರ ನೀಡಬೇಕಾಗಿ ಕೃಷಿಕರು ಆಗ್ರಹಿಸಿದ್ದಾರೆ