ಕೊಡಗಿನ ಆನೆಕಾಡು ಬಳಿ ಭೀಕರ ಅಪಘಾತ

0

ಬೈಕ್ ಸವಾರ ಪೆರಾಜೆಯ ಕಾತಿ೯ಕ್ ಭಟ್ ಸ್ಥಳದಲ್ಲಿಯೇ ಮೃತ್ಯು

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕೊಡಗಿನ ಆನೆಕಾಡು ಬಳಿ ಸಂಭವಿಸಿದೆ.

ಬೈಕ್ ಸವಾರ ಪೆರಾಜೆಯ ಕಾರ್ತಿಕ್ ಮೃತಪಟ್ಟ ವ್ಯಕ್ತಿ.
ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯಿತು.

ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಡಿಕ್ಕಿ ಹೊಡೆದ ಬಳಿಕ ಚರಂಡಿಯೊಳಕ್ಕಾಗಿ ಕಾಡಿನೊಳಗೆ ಕಾರು ಸಾಗಿತ್ತು ಎಂದು ತಿಳಿದುಬಂದಿದೆ.