ತುಳು ಅಪ್ಪೆ ಕಲಾವಿದರು ಕುಡ್ಲ ಇವರಿಂದ ಕುಸಲ್ದ ಎಸಲ್ ಕಾಮಿಡಿ ಶೋ









ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡು ಗಾರು ಇದರ ವತಿಯಿಂದ ೩೪ನೇ ವರ್ಷದ ಶ್ರೀ ಗಣೇಶೋತ್ಸವ ಆ. ೨೭ ರಂದು ನಡೆಯಲಿದೆ. ಕಾರ್ಯಕ್ರಮವು ಯುವಕ ಮಂಡಲ ಕಳಂಜ ಇದರ ವ್ಯಾಪ್ತಿಯಲ್ಲಿ ನಡೆಯಲಿದ್ದು ಬೆಳಿಗ್ಗೆ ಗಂಟೆ ೯.೦೦ ಕ್ಜೆ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
ಬಳಿಕ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನೆ ನಡೆಯಲಿದ್ದು. ಬಳಿಕ ಗಣಪತಿ ಹವನ ನಡೆಯಲಿದೆ. ಆ ಬಳಿಕ ಅಕ್ಷರಾಭ್ಯಾಸ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಬಹುಮಾನ ವಿತರಣೆ, ಭೋಜನ ವಿತರಣೆ ನಡೆಯಲಿದೆ, ಸಂಜೆ ಗಂಟೆ ೩ ರಿಂದ ತುಳು ಅಪ್ಪೆ ಕಲಾವಿದರು ಕುಡ್ಲ ಇವರಿಂದ ಕುಸಲ್ದ ಎಸಲ್ ಕಾಮಿಡಿ ಶೋ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ ೭.೦೦ಕ್ಕೆ ಶೋಭಾಯಾತ್ರೆ ನಡೆದು ಅಯ್ಯನ ಕಟ್ಟೆ ಹೊಳೆಯಲ್ಲಿ ಮೂರ್ತಿ ಜಲಸ್ತಂಭನ ನಡೆಯಲಿದೆ.










