ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆ ಸೆ.೦೩ ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಪೂಕಳಂ ಚಿತ್ತಾರ ಹಾಗೂ ಮಹಾಬಲಿ ಚಕ್ರವರ್ತಿಯ ವೇಷಧಾರಿಯ ಪ್ರವೇಶವನ್ನು ಚೆಂಡೆ ಮೇಳದೊಂದಿಗೆ ಸುಳ್ಯದ ಕಮಿಟಿ “ಬಿ’ ಎ.ಒ.ಎಲ್.ಇ.(ರಿ) ಡೈರೆಕ್ಟರ್ ಮೌರ್ಯ ಆರ್. ಕುರುಂಜಿ ಅವರು ಸ್ವಾಗತಿಸಿದರು.








ಸಭಾಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ ಉದ್ಘಾಟಿಸಿ ಹಬ್ಬದ ಆಚರಣೆಯ ವಿಶೇಷತೆಯನ್ನು ತಿಳಿಸಿದರು.
ವೇದಿಕೆಯಲ್ಲಿ ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಎ., ವಿದ್ಯಾರ್ಥಿ ಸಲಹೆಗಾರ ಪ್ರೊ. ಮನೋಹರ ಎ.ಎನ್. ಹಾಗೂ ವಿಶೇಷ ಅತಿಥಿ ಮಹಾಬಲಿ
ಉಪಸ್ಥಿತರಿದ್ದರು.

ತದನಂತರ ಎಂಬಿ.ಎ. ವಿದ್ಯಾರ್ಥಿಗಳು ತಿರುವಾಥಿರ ನೃತ್ಯವನ್ನು ಪ್ರಸ್ತುತಪಡಿಸಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿಗಳಿಗಾಗಿ ಓಣಂ ಸದ್ಯ ಬೋಜನ ಕೂಟವನ್ನು ಏರ್ಪಡಿಸಲಾಯಿತು. ಲೀಷ್ಮಾ ಎಂ.ಎಂ. ಸ್ವಾಗತಿಸಿ, ದೀಕ್ಷಿತ್ ವಂದಿಸಿದರು. ಸಾಯಿಸ್ಮ್ರತಿ ಮತ್ತು ಕದೀಜತ್ ಮುನೀಶಾ ಕಾರ್ಯಕ್ರಮವನ್ನು ನಿರೂಪಿಸಿದರು.










