ನಿವೃತ್ತ ಸೈನಿಕನಿಗೆ ಪ್ರಾರ್ಥಮಿಕ ಹಂತದ ತರಬೇತಿ ನೀಡಿದ್ದ ವಿದ್ಯಾಮಾತಾ
ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ PC/PSI ಬ್ಯಾಚ್ ನಲ್ಲಿ ತರಬೇತಿ ಪಡೆದಿದ್ದ ಭಾರತೀಯ ಸೇನೆಯ ನಿವೃತ್ತ ಯೋಧರಾದ ಹರಿಪ್ರಸಾದ ಪಿ ರವರು 2024ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಲಾಖಾ ತರಬೇತಿಯನ್ನು ಮುಗಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಜಿಲ್ಲಾ ಮೀಸಲು ಪಡೆಯ ಕಾನ್ಸ್ಟೇಬಲ್ ಆಗಿ ನಿಯೋಜನೆಗೊಂಡಿರುತ್ತಾರೆ.
ನಿರಂತರ ಪರಿಶ್ರಮದಿಂದ ಆಯ್ಕೆಗೊಂಡ ಹರಿಪ್ರಸಾದ ಪಿ
ಹರಿಪ್ರಸಾದರವರು 18 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ದೇಶದ ವಿವಿದೆಡೆ ಸೇವೆ ಸಲ್ಲಿಸಿ ನಿವೃತ್ತರಾದ ನಂತರದಲ್ಲಿ ಪೊಲೀಸ್ ಇಲಾಖೆಯನ್ನು ಸೇರುವ ಇಚ್ಛೆಯಿಂದ ವಿದ್ಯಾಮಾತಾ ಅಕಾಡೆಮಿಯಲ್ಲಿ ಪೊಲೀಸ್ ನೇಮಕಾತಿಯ ತರಬೇತಿಯನ್ನು ಪಡೆದು, ಮಂಗಳೂರಿನಲ್ಲಿ ರೂಮ್ ಮಾಡಿಕೊಂಡು ಓದುತ್ತಾ ತನ್ನ ಪ್ರಯತ್ನ ಮುಂದುವರೆಸಿದ್ದರು.















KSP-DR Constable ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಎಲ್ಲಾ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರಾದ ಇವರು, ಪುತ್ತೂರು ತಾಲೂಕು ಮಾಲೆತ್ತೊಡಿ ನಿವಾಸಿಗಳಾದ ಶೀನಪ್ಪ ಗೌಡ ಮತ್ತು ದೇವಕಿ ದಂಪತಿಗಳ ಪುತ್ರರಾದ ಇವರು ಪತ್ನಿ ಶ್ಯಾಮಲ ಕೇಮ್ಮಾಯಿ ಮಕ್ಕಳಾದ ಮಿತಾಂಸ್ ಹಾಗೂ ರಿಯಾಂಶಿ ಜೊತೆ ವಾಸಿಸುತ್ತಿದ್ದು ಇವರ ಸಾಧನೆಯಿಂದ ಅವರ ಮನೆಯವರ, ಊರಿನ ಹಾಗೂ ನಿರಂತರವಾಗಿ ಹರಿಪ್ರಸಾದರವರಿಗೆ ವಿವಿಧ ಸರಕಾರಿ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವಿಕೆ ಹಾಗೂ ತರಬೇತಿ ನೀಡಿರುವ ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಉನ್ನತಕ್ಕೆ ಏರಿಸಿದ್ದು ಹೆಮ್ಮೆಯ ಸಂಗತಿ. ಇವರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ತರಬೇತುದಾರರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಸೈನಿಕ ಕೋಟಾದ ಅಡಿಯಲ್ಲಿ ನೇಮಕಗೊಳ್ಳಲು ಅವಕಾಶವಿದ್ದು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದು ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ನಿವೃತ್ತ ಯೋಧರಿಗೂ ವಿಶೇಷ ತರಬೇತಿ ನೀಡುತ್ತಿದೆ.
ನಿವೃತ್ತ ಯೋಧರಾದ ಮಡಿಕೇರಿ ಜೋಡುಪಾಲ ಮೂಲದ ನಿತಿನ್ ಎನ್ ಡಿ ರವರು ವಿದ್ಯಾಮತಾದಲ್ಲಿ ತರಬೇತಿ ಪಡೆದು ಪೊಲೀಸ್ ಇಲಾಖಾ ನೇಮಕಾತಿ ಯಲ್ಲಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. 2025ನೇ ಸಾಲಿನ ಪೊಲೀಸ್ ನೇಮಕಾತಿ ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿ ಪೂರ್ವ ತರಬೇತಿಯು ಪ್ರಾರಂಭಗೊಂಡಿದ್ದು ಆಸಕ್ತರು ವಿದ್ಯಾಮಾತಾ ಅಕಾಡೆಮಿ ಯ ಸಂಪರ್ಕ ಸಂಖ್ಯೆಗಳಾದ 9620468869/ 9148935808ನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.










