ಮಂಡೆಕೋಲು : ಗೋಪೂಜಾ ಮತ್ತು ಸ್ವಚ್ಛ ಜಾಗೃತಿ ಕಾರ್ಯಕ್ರಮ

0

ಮಂಡೆಕೋಲಿನ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ, ವೀರವನಿತೆ ರಾಷ್ಟ್ರ ಸೇವಿಕಾ ಸಮಿತಿ ಮಂಡೆಕೋಲು,
ಇದರ ವತಿಯಿಂದ. 7 ನೇ ವರ್ಷದ ಗೋಪೂಜಾ ಮತ್ತು ಸ್ವಚ್ಛ ಜಾಗೃತಿ ಕಾರ್ಯಕ್ರಮ ಅ.19ರಂದು ಮಂಡೆಕೋಲು ಪರಿಶಿಷ್ಟ ಜಾತಿ ಕಾಲೊನಿ ಯಲ್ಲಿರುವ ಕೊರಗಜ್ಜ ನ ಗುಡಿ ಬಳಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷರು ವೀರವನಿತೆ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯ ವಾಹಿಕರಾದ ಶ್ರೀಮತಿ ವಸಂತಿ ಉಗ್ರಾಣಿ ಮನೆ ವಹಿಸಿದರು.

ಗೋಪೂಜೆ ಮತ್ತು ಸ್ವಚ್ಛ ಜಾಗೃತಿಯ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿ ಸುಳ್ಯ ರೋಟರಿ ಕ್ಲಬ್‌ ನ ಮಾಜಿ ಕಾರ್ಯದರ್ಶಿ ಶ್ರೀಮತಿ ಮಧುರ ಎಂ.ಆರ್.‌ ನೀಡಿದರು.

ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷರಾದ ವಿನುತಾ ಪಾತಿಕಲ್ಲು, ನಿರ್ದೇಶಕರಾದ ಗುರುರಾಜ್‌ ಅಜ್ಜಾವರ, ಮನೆಯ ಹಿರಿಯರಾದ ಚುಕ್ರ, ಗ್ರಾಮ ಪಂಚಾಯತ್‌ ಸದಸ್ಯೆ ಪ್ರಶಾಂತಿ ಮಂಡೆಕೋಲು ಬೈಲು, ಯುವಜನ ಸಂಯುಕ್ತ ಮಂಡಳಿಯ ಗೌರವಾಧ್ಯಕ್ಷರಾದ ವಿಜಯಕುಮಾರ ಉಬರಡ್ಕ, ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರಾದ ಲಕ್ಷಣ ಗೌಡ ಉಗ್ರಾಣಿ ಮನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧ್ಯಕ್ಷರಾದ ಶಾರದಾ ರಾಮನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೋಪೂಜೆ ನಡೆಸಿ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ, ಗಿಡ ನೆಡುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮೋಹಿನಿ ಮಂಡೆಕೋಲು ಸ್ವಾಗತಿಸಿ, ವಿನುತ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗಿತಾ ವಂದಿಸಿದರು. ಸ್ವಾತಿ ಉಗ್ರಾಣಿ ಮನೆ ಪ್ರಾರ್ಥಿಸಿ, ಸರೋಜಿನಿ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.