








ಅಜ್ಜಾವರ ಗ್ರಾಮದ ಉದ್ದಂತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ನ.17 ರಂದು ನಡೆಯಿತು. ಅಂಗನವಾಡಿ ಪುಟಾಣಿ ಮಕ್ಕಳು ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಿಗೆ ಆಟೋಟ ಸ್ವರ್ಧೆ ನಡೆಯಿತು. ಪ್ರೋತ್ಸಾಹ ಬಹುಮಾನದ ಪ್ರಾಯೋಜಕರಾಗಿ ವಿಶ್ವಕುಮಾರ್ ಕೆದ್ಕಾರ್, ಅನಂತಕೃಷ್ಣ ಬರಮೇಲು, ಲಘು ಉಪಾಹಾರದ ಪ್ರಾಯೋಜಕರಾಗಿ ಮಂಜುನಾಥ ಕುಕ್ಕಟ್ಟಿ ಮತ್ತು ಮಾಲತಿ ಮಂಜು ಮುಳ್ಯ ನೀಡಿ ಸಹಕರಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಧನ್ಯಕುಮಾರಿ, ಸಹಾಯಕಿ ದೇವಮ್ಮ ಸಮಿತಿಯ ಅಧ್ಯಕ್ಷರಾದ ಪ್ರಜ್ಞಾ ಕುಕ್ಕೆಟ್ಟಿ, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.











