ಸಮಿತಿ ಪದಾಧಿಕಾರಿಗಳಿಂದ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ, 28 ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕದಲ್ಲಿ ಡಿ.30ರಂದು ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ.
ಡಿ.17ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಹಿತ್ಯ ಸಮ್ಮೇಳನದ ಕುರಿತು ಪೂರ್ಣ ವಿವರ ನೀಡಿದರು.
ಡಿ.30ರಂದು ಬೆಳಗ್ಗೆ ಕುಕ್ಕುಜಡ್ಕ ಪೇಟೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ಹೊರಡುವುದು. ಈ ಬಾರಿ ಸಾಹಿತಿ ತೇಜಕುಮಾರ್ ಬಡ್ಡಡ್ಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಮೆರವಣಿಗೆಗೆ ಮಾಜಿ ಸಚಿವ ಎಸ್.ಅಂಗಾರ ಚಾಲನೆ ನೀಡುವರು.
ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷ ಜಾನಕಿ ಕಂದಡ್ಕ ರಾಷ್ಟ್ರ ಧ್ವಜಾರೋಹಣ ಗೈದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಮಾಡುವರು. ಸುಳ್ಯಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ಮಾಡುವರು.
ಹಿರಿಯ ಸಾಹಿತಿ ಕೆ.ಪಿ.ಸುರೇಶ್ ಕಂಜರ್ಪಣೆ ಸಮ್ಮೇಳನದ ಉದ್ಘಾಟನೆ ಮಾಡುವರು. ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೊಸ ಕೃತಿ ಬಿಡುಗಡೆ ಮಾಡುವರು. ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸುತ್ತಾರೆ.









ಸಮಾರಂಭದಲ್ಲಿ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಬರೆದ ಮಜಲಿನಾಚೆ ಕಥಾಸಂಕಲನ ಹಾಗೂ ಮಮತಾ ರವೀಶ್ ಪಡ್ಡಂಬೈಲು ಬರೆದ ಗುಬ್ಬಿ ದನಿ ಕವನ ಸಂಕಲನ ಬಿಡುಗಡೆಯಾಗುವುದು.
ಉದ್ಘಾನೆಯ ಬಳಿಕ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ನಡೆಯುವುದು.
ಕವಿಗೋಷ್ಟಿ : ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶಾಲಿನಿ ಡಿ.ಎಲ್. ವಹಿಸಲಿದ್ದಾರೆ. 11 ಮಂದಿ ಸಾಹಿತಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವರು.
ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.
ವಿಚಾರಗೋಷ್ಠಿ : ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ವಹಿಸಲಿದ್ದಾರೆ.
ಅಪರಾಹ್ನ ಕಾವ್ಯ ಕುಂಚ ಗಾಯನ ನಡೆಯುವುದು.
ಸಂಜೆ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಸಾಹಿತಿಗಳಾದ ಡಾ.ನಾ. ಸೋಮೇಶ್ವರ ಮಾಡಲಿದ್ದಾರೆ.
ಕನ್ನಡ ಕಸ್ತೂರಿ ಸನ್ಮಾನ : ಸಮಾರೋಪ ಸಮಾರಂಭದಲ್ಲಿ ಎಂ.ಟಿ.ಶಾಂತಿಮೂಲೆ (ಸಾಹಿತ್ಯ ಮತ್ತು ಕೃಷಿ), ಆನೆಕಾರ ಗಣಪಯ್ಯ (ಧಾರ್ಮಿಕ ಮತ್ತು ಸಂಘಟನೆ), ಶ್ರೀಮತಿ ಸುಲೋಚನಾ ಪಿ.ಕೆ. (ಹಿರಿಯ ಸಾಹಿತಿ), ಮೋಹನ ಶೇಣಿ (ರಂಗಭೂಮಿ ಮತ್ತು ಚಲನಚಿತ್ರ), ಶೇಖರ ಮಣಿಯಾಣಿ (ಯಕ್ಷಗಾನ), ವೈಕುಂಠ ಪ್ರಭು (ಗಣಕ ಯಂತ್ರ ಪರಿಣಿತಿ), ಹರೀಶ್ ಮೋಟುಕಾನ (ಪತ್ರಿಕೋದ್ಯಮ), ಶ್ರೀನಿವಾಸ ಮಾಸ್ತರ್ ಹಳೆಗೇಟು (ಶಿಲ್ಪಕಲೆ), ಚಂದ್ರಾ ಕೋಲ್ಚಾರ್ (ಸಹಕಾರ ಸಮಾಜಸೇವೆ), ಶ್ರೀಮತಿ ಭವಾನಿ ವಸಂತ್ (ಕ್ರೀಡೆ), ವಿಜಿತ್ ಮೈತಡ್ಕ (ಭೂತಾರಾಧನೆ), ಇಬ್ರಾಹಿಂ ಸುಳ್ಯ (ವ್ಯಾಪಾರೋದ್ಯಮ) ಹಾಗೂ ಕನ್ನಡ ಕಸ್ತೂರಿ ಗೌರವಾರ್ಪಣೆಯು ಬಾಲ ಪ್ರತಿಭೆ ಭಾನವಿ ಪಿ.ಎಸ್. (ಕ್ರೀಡೆ) ಸನ್ಮಾನಿಸಲಾಗುವುದು ಎಂದು ವಿವರ ನೀಡಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ ಇವರಿಂದ ನೃತ್ಯ ವೈಭವ ಹಾಗೂ ಬೆಂಗಳೂರು ಕಾಜಾಣ ತಂಡದಿಂದ ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ ಮೂಡಿಬರಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ
ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು, ಕ.ಸಾ.ಪ. ನಿರ್ದೇಶಕರಾದ ಸಂಕೀರ್ಣ ಚೊಕ್ಕಾಡಿ, ಶರೀಫ್ ಜಟ್ಟಿಪಳ್ಳ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ ಅಜ್ಜಾವರ ಇದ್ದರು.



