ಅಪಘಾತಕ್ಕೀಡದ ಕಾರು ಮಂಡ್ಯ ಮೂಲದ್ದು

0

ಕುಕ್ಕೆ ಸುಬ್ರಹ್ಮಣ್ಯ ಯಾತ್ರೆ ಮುಗಿಸಿ
ಊರಿಗೆ ಹಿಂತಿರುಗುತ್ತಿದ್ದ ಕಾರು ಸವಾರರು

ಅಪಘಾತಕ್ಕೀಡದ ಕಾರು ಮಂಡ್ಯ ಮೂಲದವರದಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದಿಂದ ಯಾತ್ರೆ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದರು.

ಮರ್ಕಂಜ ಮೂಲಕ ಅರಂತೋಡಿಗೆ ಬಂದು ಮಾಣಿ ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

ಮೃತ ಯುವಕ ಕಲ್ಲುಗುಂಡಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಾರು ಚಾಲಕನಿಗೆ ಸ್ಥಳೀಯರಿಂದ ಥಳಿತ

ಅಪಘಾತ ನಡೆದ ಬಳಿಕ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಕಾರು ಚಾಲಕನ ಮೇಲೆ ಆಕ್ರೋಶ ಭರಿತರಾಗಿ ಥಳಿಸಿರುವ ಬಗೆಯು ಕೇಳಿ ಬಂದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಕಾರು ಚಾಲಕನನ್ನು ಮತ್ತೊಂದು ವಾಹನದಲ್ಲಿ ಕುಳ್ಳಿರಿಸಿ ಠಾಣೆಗೆ ಕರೆ ತಂದಿದ್ದಾರೆ ಎನ್ನಲಾಗಿದೆ.