ಆದಿ ದ್ರಾವಿಡ ಯುವವೇದಿಕೆ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ ರವರಿಗೆ ಸನ್ಮಾನ

0

ಆದಿ ದ್ರಾವಿಡ ಯುವ ವೇದಿಕೆ ವತಿಯಿಂದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಜೂ.20 ರಂದು ಸಂಜೆ ಅವರ ಮನೆಯಲ್ಲಿ, ಶಾಲು ಹೊದಿಸಿ, ಡಾ, ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ನೀಡುವುದರ ಮೂಲಕ ಅಭಿನಂದಿಸಲಾಯಿತು. ಹಾಗೂ ಸೋಣಂಗೇರಿಯಲ್ಲಿ ನಿರ್ಮಾಣವಾಗುತ್ತಿರುವ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುವಂತೆ, ಆದಿ ದ್ರಾವಿಡ ಯುವ ವೇದಿಕೆ ವತಿಯಿಂದ ಆಗ್ರಹಿಸಿ, ಮನವಿ ನೀಡಲಾಯಿತು. ಮತ್ತು ಸುಳ್ಯ ತಾಲೂಕಿನಲ್ಲಿ ಆದಿ ದ್ರಾವಿಡ ಸಮುದಾಯ ಭವನಕ್ಕೆ ಸ್ಥಳ ಕಾದಿರಿಸಿ, ಸರಕಾರದಿಂದ ಅನುದಾನ ಒದಗಿಸಿಕೊಡುವಂತೆ ಮನವಿ ನೀಡಲಾಯಿತು.

ಯುವ ವೇದಿಕೆಯ ಅಧ್ಯಕ್ಷ ರಾಮಚಂದ್ರ ಬಿಕೆ, ಕಾರ್ಯದರ್ಶಿ ಸತೀಶ್, ಪ್ರಕಾಶ, ದಾಮೋದರ, ಚಂದ್ರಕಾಂತ್, ಜಗನಾಥ್, ಕೇಶವ,ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.