ಎಲಿಮಲೆ‌ : ದ್ವಿಚಕ್ರ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದು ಢಿಕ್ಕಿ ಹೊಡೆದ ಬೈಕ್

0

ಸವಾರರಿಗೆ ಗಂಭೀರ ಗಾಯ

ದ್ವಿಚಕ್ರ ವಾಹನಕ್ಕೆ ‌ವಿರುದ್ಧ ದಿಕ್ಕಿನಿಂದ‌ ಬಂದ ಬೈಕ್‌ ಢಿಕ್ಕಿ‌ಹೊಡೆದ ಪರಿಣಾಮ‌ ಸವಾರರು ಗಂಭೀರ ಗಾಯಗೊಂಡ ಘಟನೆ ಎಲಿಮಲೆಯಿಂದ‌ ನಿನ್ನೆ(ಜೂ.20) ಸಂಜೆ ವರದಿಯಾಗಿದೆ.

ಸುಳ್ಯ ಕಡೆಯಿಂದ ಗುತ್ತಿಗಾರು‌ ಕಡೆಗೆ ತೆರಳುತ್ತಿದ್ದ ಸುಳ್ಯ ಕೆವಿಜಿ ಸಂಸ್ಥೆಯ ಉದ್ಯೋಗಿ ಗೌತಮ್ ಬಾಳಿಕ್ಕಳ ಮತ್ತು ಕೆವಿಜಿಯಲ್ಲಿ ವ್ಯಾಸಂಗ‌ ಮಾಡುತ್ತಿರುವ ನಾಗೇಶ್ ಮಣಿಯಾನ ನಡುಗಲ್ಲು ಎಂಬವರ ಬೈಕ್ ಗೆ ಮಾವಿನಕಟ್ಟೆ‌ ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ವಿರುದ್ಧ ದಿಕ್ಕಿನಲ್ಲಿ ಬಂದು‌ ಢಿಕ್ಕಿ ಹೊಡೆದಿದೆ.

ಪರಿಣಾಮ ಗೌತಮ್ ರವರು ಗಂಭೀರ ಗಾಯಗೊಂಡು, ನಾಗೇಶ್ ರವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದರು. ಗೌತಮ್‌ನವರನ್ನು ಜ್ಞಾನದೀಪ ಶಾಲೆಯ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು, ಮತ್ತಿತರರು ಸತೀಶ್ ಎಂಬವರ ವನಶ್ರೀ ಜೀಪಿನಲ್ಲಿ ಕೆವಿಜಿ ಆಸ್ಪತ್ರೆಗೆ ಕರೆತಂದು‌, ಅಲ್ಲಿಂದ ಹೆಚ್ಚಿನ‌ ಚಿಕಿತ್ಸೆಗೆ ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು‌ ತಿಳಿದು ಬಂದಿದೆ.

ಢಿಕ್ಕಿ ಹೊಡೆದ ದ್ವಿಚಕ್ರ ವಾಹನ ಮಂಗಳೂರು ಕಡೆಯ ಮರದ ವ್ಯಾಪಾರಿಗಳೆಂದೂ, ಅವರಿಗೂ ಗಾಯಗಳಾಗಿದ್ದು ಮಂಗಳೂರಿನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆಂದು‌ ತಿಳಿದು‌ಬಂದಿದೆ. ಅವರ‌ ಹೆಸರು ವಿಳಾಸ ತಿಳಿದು ಬಂದಿಲ್ಲ.