ಕು. ಶ್ರೇಯಾ ಗುಂಡ್ಯಡ್ಕ ಅವರಿಂದ ಕ್ಯಾನ್ಸರ್ ಪೀಡಿತರಿಗೆ ಕೇಶದಾನ

0

ಅಮೃತಗಂಗಾ ಸಮಾಜಸೇವಾ ಸಂಸ್ಥೆ ಮೂಲಕ ಕೇಶದಾನ

ಜಾಲ್ಸೂರು ಗ್ರಾಮದ
ಸೋಣಂಗೇರಿಯ ಗುಂಡ್ಯಡ್ಕ ನಿವಾಸಿ ಕು. ಶ್ರೇಯಾ ಅವರು ಸುಳ್ಯದ ಅಮೃತಗಂಗಾ ಸಮಾಜ ಸೇವೆ ಸಂಸ್ಥೆಯ ಮೂಲಕ ಕ್ಯಾನ್ಸರ್ ಪೀಡಿತರಿಗೆ ತಮ್ಮ ತಲೆಗೂದಲನ್ನು ದಾನವಾಗಿ ನೀಡಿದ್ದಾರೆ.


ಜಾಲ್ಸೂರು ಗ್ರಾಮದ ಸೋಣಂಗೇರಿ ಗುಂಡ್ಯಡ್ಕದ ಸಂದೇಶ್ ನಾಯಕ್ ಹಾಗೂ ಜಾಲ್ಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್. ನಾಯಕ್ ದಂಪತಿಯ ಪುತ್ರಿಯಾಗಿರುವ ಕು. ಶ್ರೇಯಾ ಅವರು ಜೂ.21ರಂದು ಸುಳ್ಯದ ದುರ್ಗಾ ಬ್ಯೂಟಿಪಾರ್ಲರ್ ನಲ್ಲಿ ತಮ್ಮ ಕೇಶದಾನ ಮಾಡಿದ್ದಾರೆ. ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ.