ಶಾಸಕಿ‌ ಭಾಗೀರಥಿ ಮುರುಳ್ಯರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನ

0

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಕು.ಭಾಗೀರಥಿ ‌ಮುರುಳ್ಯರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ ಜೂ.24 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರು ಶಾಸಕಿ ಭಾಗೀರಥಿ ಮುರುಳ್ಯ ರನ್ನು ಸನ್ಮಾನಿಸಿದರು.
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದಿಸಿ ಮಾತನಾಡಿದರು.

ಪ್ರೆಸ್ ಕ್ಲಬ್ ನಿರ್ದೇಶಕರುಗಳಾದ ಕೃಷ್ಣ ಬೆಟ್ಟ, ಯಶ್ವಿತ್ ಕಾಳಂಮನೆ, ಈಶ್ವರ ವಾರಣಾಸಿ, ಪೂಜಾಶ್ರೀ ವಿತೇಶ್ ಕೋಡಿ, ಶರೀಫ್ ಜಟ್ಟಿಪಳ್ಳ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ,
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ದಯಾನಂದ ಕಲ್ನಾರ್, ಗಣೇಶ್ ಕುಕ್ಕುದಡಿ, ಪದ್ಮನಾಭ ಅರಂಬೂರು, ಹಸೈನಾರ್ ಜಯನಗರ, ಜಯಶ್ರೀ ಕೊಯಿಂಗೋಡಿ, ತೇಜೇಶ್ವರ್ ಕುಂದಲ್ಪಾಡಿ, ಶ್ರೀಜಿತ್ ಸಂಪಾಜೆ, ಭಾಗೀಶ್ ಕೆ.ಟಿ., ಸತೀಶ್ ಹೊದ್ದೆಟ್ಟಿ, ಶಿವರಾಮ ‌ಕಜೆಮೂಲೆ, ಯತೀಶ್ ಕದ್ರ, ಮಹೇಶ್ ರೈ‌ ಮೇನಾಲ, ಧೀರೇಶ್ ನಡುಬೈಲು, ರವಿವರ್ಮ ಮೊದಲಾದವರಿದ್ದರು.

ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ಸ್ವಾಗತಿಸಿದರು.
ಕೋಶಾಧಿಕಾರಿ ರಮೇಶ್ ‌ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.