ನಿಂತಿಕಲ್ಲು: ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಲಂಚ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ಸ್ವೀಕಾರ

0

ಸುದ್ದಿ ಜನಾಂದೋಲನ ವೇದಿಕೆಯ ಆಶ್ರಯದಲ್ಲಿ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನದ ಅಂಗವಾಗಿ ನಿಂತಿಕಲ್ಲಿನ ಕೆ.ಎಸ್ ಗೌಡ ಎಜ್ಯುಕೇಶನಲ್ ಟ್ರಸ್ಟ್‌ನ ಆಶ್ರಯದಲ್ಲಿರುವ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಲಂಚ ಭ್ರಷ್ಟಾಚಾರ ವಿರೋಧ ಪ್ರತಿಜ್ಞಾ ಸ್ವಿಕಾರ ಕಾರ್ಯಕ್ರಮ ಜೂ. 26ರಂದು ನಡೆಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಸುಧೀರ್ ಎಂ.ವಿ, ತರಬೇತಿ ಅಧಿಕಾರಿಗಳಾದ ದಯಾನಂದ ಕೆ.ಎಸ್, ಶೇಖರ ಗೌಡ ಕೆ.ಜಿ, ಶ್ರೀಮತಿ ರೂಪಾ ಪಿ‌.ಜೆ, ಶ್ರೀಧರ ಎ, ತೃಪ್ತಿ ಪಿ, ಪ್ರಜ್ವಲ್ ಕೆ.ಟಿ, ನವ್ಯಶ್ರೀ, ಕಚೇರಿ ಸಿಬ್ಬಂದಿಗಳಾದ ಕರುಣಾಕರ ಕೆ, ಶ್ರೀಮತಿ ಶೀಲಾವತಿ, ವಿದ್ಯಾರ್ಥಿಗಳು ಕಾರ್ಯಕ್ರಮಲ್ಲಿ ಭಾಗವಹಿಸಿ ಪ್ರತಿಜ್ಞೆ ಸ್ವೀಕರಿಸಿದರು. ತರಬೇತಿ ಅಧಿಕಾರಿ ಪ್ರಸನ್ನ ಕುಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ಸುದ್ದಿ ಪ್ರತಿನಿಧಿ ಸಂಕಪ್ಪ ಸಾಲ್ಯಾನ್, ಸಿಬ್ಬಂದಿ ಕು. ಬೃಂದಾ ಪೂಜಾರಿ ಮುಕ್ಕೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.