ಪೈಚಾರಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ

0

ಕೂಡಲೇ ನಿಯಂತ್ರಿಸಲು ಸುಳ್ಯ ನ.ಪಂ ಗೆ ಪೈಚಾರ್ ಸಲಫಿ ಮಸೀದಿ ಆಡಳಿತ ಸಮಿತಿಯಿಂದ ಮನವಿ

ಸುಳ್ಯ ನಗರದಾದ್ಯಂತ ಬೀದಿ ನಾಯಿಗಳ ಕಾಟ ಇತ್ತೀಚಿಗೆ ಹೆಚ್ಚಾಗುತ್ತಿದೆ.ಶಾಂತಿನಗರ ಪೈಚಾರ್ ಪರಿಸರದಲ್ಲಿ ಸಾರ್ವಜನಿಕ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.

ಶಾಲೆಗೆ ಹಾಗೂ ಮುಂಜಾನೆ ಮದರಸ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಾಯಿಗಳ‌ ಕಾಟದಿಂದ ದಿಂದ ಅವರವರ ಕೆಲಸಕ್ಕೆ ಹೋಗಲು ಕಷ್ಟಕರ ಪರಿಸ್ಥಿತಿ ನಿರ್ಮಾಣ ವಾಗಿದೆ. ವಯೋವೃದ್ಧರು ಕೂಡ ಇದರಿಂದ ತೊಂದರೆ ಪಡುತ್ತಿದ್ದಾರೆ.

ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ಪೈಚಾರ್ ಸಲಫಿ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಪಿ.ಎಂ ಅಬ್ದುಲ್ಲಾ ಸುಳ್ಯ ಕಾರ್ಸ್,ಪ್ರಧಾನ ಕಾರ್ಯದರ್ಶಿ ಪಾರೂಕ್ ಪೈಚಾರ್ ರವರು ನಗರ ಪಂಚಾಯತ್ ಮುಖ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.