ಕಳಂಜ: ಕಜೆಮೂಲೆ – ತಂಟೆಪ್ಪಾಡಿ – ಕಿಲಂಗೋಡಿ ರಸ್ತೆ ಕಾಂಕ್ರೀಟೀಕರಣ

0

ಕಾಮಗಾರಿ ಅಪೂರ್ಣ, ರಸ್ತೆ ಮುಚ್ಚುವ ಭೀತಿ

ಕಳಂಜ ಗ್ರಾಮದ ಕಜೆಮೂಲೆ – ತಂಟೆಪ್ಪಾಡಿ – ಕಿಲಂಗೋಡಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಅಪೂರ್ಣವಾಗಿದ್ದು ರಸ್ತೆ ಮುಚ್ಚುವ ಭೀತಿ ಉಂಟಾಗಿದೆ.

ರಸ್ತೆಯನ್ನು ಕಾಂಕ್ರೀಟೀಕರಣ ಮಾಡುವ ಸಲುವಾಗಿ ಸುಮಾರು ಒಂದು ಕಿ‌. ಮೀ ನಷ್ಟು ರಸ್ತೆಯನ್ನು ಮೂರು ತಿಂಗಳ ಹಿಂದೆ ಅಗೆದು ಮಣ್ಣು ತೆಗೆಯಲಾಗಿತ್ತು. ಎರಡು ತಿಂಗಳ ಬಳಿಕ ಅದರ ಅರ್ಧದಷ್ಟು ಭಾಗದ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದ್ದು ಉಳಿದ ಭಾಗ ಹಾಗೇ ಬಿಟ್ಟು ಕಂಟ್ರಾಕ್ಟರ್ ಹೋಗಿದ್ದಾರೆ. ಇದೀಗ ಮಳೆಗಾಲ ಆರಂಭವಾಗಿದ್ದು ಕಾಂಕ್ರೀಟ್ ಮಾಡಲು ಬಾಕಿ ಇದ್ದ ರಸ್ತೆ ಸಂಪೂರ್ಣ ಹದ ಗೆಟ್ಟಿದ್ದು ರಸ್ತೆ ಸಂಚಾರ ಸ್ಥಗಿತವಾಗುವ ಸಂಭವ ಇರುವುದಾಗಿ ವರದಿಯಾಗಿದೆ.