ಯೋಗದಲ್ಲಿ ಸಾಧನೆ ಮಾಡಿದ ಆಶ್ರಿತ್ ಎ.ಸಿ.

0

  ಸ್ನೇಹಮಹಿ ವಿವೇಕಾನಂದ ಯೋಗ ಕೇಂದ್ರ ಕಡೂರು, ಇವರು ನಡೆಸಿದ ರಾಜಮಟ್ಟದ ಯೋಗ ಸ್ಪರ್ಧೆ 2023 ಇದರಲ್ಲಿ ಐದರಿಂದ ಏಳನೇ ವಯೋಮಾನದ ಬಾಲಕರ ವಿಭಾಗದಲ್ಲಿ  ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ   ಎರಡನೇ ತರಗತಿಯ ಆಶ್ರಿತ್ ಎ.ಸಿ ಭಾಗವಹಿಸಿ ಚತುರ್ಥ ಬಹುಮಾನವನ್ನು ಪಡೆದಿರುತ್ತಾನೆ. ಇವನು ಸಂತೋಷ ಮುಂಡಕಜೆ ಅವರ ವಿದ್ಯಾರ್ಥಿ.

ಆಶ್ರಿತ್ ಎ.ಸಿ ಇವರ ಸಾಧನೆಯನ್ನು ಮೆಚ್ಚಿದ ಪ್ರಾಂಶುಪಾಲ ಅರುಣ್ ಕುಮಾರ್ ಎಸ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ವಿ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.