ಎಂ.ಕೆ.ಚಿದಾನಂದ ಬೀರಮಂಗಲರವರಿಗೆ ಶ್ರದ್ಧಾಂಜಲಿ – ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ

0

ಎಂ.ಕೆ.ಚಿದಾನಂದರವರು ಗೌಡ ಸಮಾಜಕ್ಕೆ ಮಾದರಿ ವ್ಯಕ್ತಿ – ಎಂ.ಬಿ.ಸದಾಶಿವ

ಸುಳ್ಯದ ಬೀರಮಂಗಲ ನಿವಾಸಿ ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಉದ್ಯೋಗಿ ಎಂ.ಕೆ.ಚಿದಾನಂದರವರು ಹೃದಯಾಘಾತದಿಂದ ಜೂ.29 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಜು.10 ರಂದು ಸುಳ್ಯದ ಗಿರಿದರ್ಶಿನಿ ಮರಾಠಿ ಭವನದಲ್ಲಿ ನಡೆಯಿತು.
ಎಂ.ಬಿ.ಸದಾಶಿವರವರು ಮಾತನಾಡಿ ಎಂ.ಕೆ.ಚಿದಾನಂದರವರು ಎಲ್ಲರನ್ನು ಸಮಭಾವದಿಂದ ನೋಡಿದವರು.ಎಲ್ಲರೊಂದಿಗೆ ಬೆರೆಯುತ್ತಿದ್ದ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದವರು,ಗೌಡ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಾಳಿದವರು ಎಂದು ಅವರ ಆದರ್ಶ ಗುಣಗಳನ್ನು ನೆನಪಿಸಿ ನುಡಿನಮನ ಸಲ್ಲಿಸಿದರು.


ಒಂದು ನಿಮಿಷದ ಮೌನ ಪ್ರಾರ್ಥನೆ ನಡೆದ ಬಳಿಕ ಆಗಮಿಸಿದ ನೂರಾರು ಜನರು ದಿ.ಎಂ.ಕೆ.ಚಿದಾನಂದರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಪ್ರೇಮಲತಾ, ಪುತ್ರ ಚಿಂತನ್ , ಸೊಸೆ ಸ್ಪೂರ್ತಿ, ಸಹೋದರ ಎಂ.ಕೆ.ರವಿಪ್ರಕಾಶ್, ಸಹೋದರಿಯರಾದ ಶ್ರೀಮತಿ ಜಯಮ್ಮ ,ಶ್ರೀಮತಿ ಸಂಧ್ಯಾ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.