ನಿಂತಿಕಲ್ಲು ಐಟಿಐಯಲ್ಲಿ ಬೀಳ್ಕೊಡುಗೆ ಸಮಾರಂಭ

0

ನಿಂತಿಕಳ್ಳಿನ ವರ್ಷಾ ನಗರದಲ್ಲಿರುವ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ಮೆಕ್ಯಾನಿಕಲ್ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ( ಎಂ .ಆರ್ .ಎ .ಸಿ ) ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಜು- 14 ರಂದು ನಡೆಯಿತು. ಸಂಸ್ಥೆಯ ಪ್ರಾಚಾರ್ಯರಾದ ಸುಧೀರ್.ಎಂ.ವಿ ರವರು ಸಭಾಧ್ಯಕ್ಷತೆ ವಹಿಸಿ ಮಕ್ಕಳ ಭವಿಷ್ಯ ಮತ್ತು ಮುಂದೇನು ಮಾಡಬೇಕು ಎಂದು ಹೇಳಿ ಶುಭ ಹಾರೈಸಿದರು.

ತರಗತಿಯ ಜೆ.ಟಿ.ಓ ಪ್ರಜ್ವಲ್ .ಡಿ.ಜೆ , ಹಿರಿಯ ತರಬೇತಿ ಅಧಿಕಾರಿ, ಶ್ರೀಮತಿ ರೂಪ, ಕಿರಿಯ ಅಧಿಕಾರಿಗಳಾದ ಪ್ರಸನ್ನ ವೈಟಿ, ಶ್ರೀಧರ್, ಕುಮಾರಿ ತೃಪ್ತಿ, ಶ್ರೀಮತಿ ನವ್ಯಶ್ರೀ, ಕಚೇರಿ ವ್ಯವಸ್ಥಾಪಕ ಕರುಣಾಕರ್, ಸಿಬ್ಬಂದಿ ಶೀಲವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಅಶ್ವಿತ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ : ಸಂಕಪ್ಪ ವರದಿ : ಸಂಕಪ್ಪ ಸಾಲಿಯಾನ್

           

ಸಾಲಿಯಾನ್.