ಕನಕಮಜಲು: ಮಳೆಗೆ ರಸ್ತೆಗೆ ಬಿದ್ದ ಬಿದಿರು ಹಿಂಡಲು: ಸ್ಥಳೀಯರಿಂದ ತೆರವು

0

ಕನಕಮಜಲು ಗ್ರಾಮದ ಕನಕಮಜಲಿನಿಂದ ದೇರ್ಕಜೆಗೆ ಸಂಪರ್ಕಿಸುವ ರಸ್ತೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿದಿರು ಹಿಂಡಲು ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ಜು.23ರಂದು ಜರುಗಿತು.

ಸ್ಥಳೀಯರಾದ ಗಣಪತಿ ಭಟ್ ದೇರ್ಕಜೆ, ಶ್ರವಣ್ ದೇರ್ಕಜೆ, ಗೋಪಾಲಯ್ಯ ಕೋಟಿಗದ್ದೆ, ಸುಧೀಂದ್ರ ಭಟ್ ದೇರ್ಕಜೆ, ಸೂರ್ಯ ನಾರಾಯಣ ಭಟ್ ಬೃಂದಾವನ, ರಾಮು ಅಜಿಲ, ಬಾಬು ಅಜಿಲ ಕೋಟಿಗದ್ದೆ ಮೊದಲಾದವರು ಸೇರಿ ತೆರವು ಗೊಳಿಸಿದರೆಂದು ತಿಳಿದುಬಂದಿದೆ.