ಕಲ್ಲಾಜೆ ತೋಟಗಳಿಗೆ ನುಗ್ಗಿದ ಹೊಳೆಯ ನೆರೆ ನೀರು, ದೇವರಹಳ್ಳಿ- ಏನೆಕಲ್ಲು ಸಂಚಾರ ಬಂದ್

0

ಬಾರೀ ಮಳೆ ಮುಂದುವರಿದಿದ್ದು ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ಹೊಳೆಯ ನೆರೆ ನೀರು ಹೊಳೆ ಬದಿಯ ತೋಟಗಳಿಗೆ ನುಗ್ಗಿದ್ದು, ಮನೆಗಳಿಗೂ ನುಗ್ಗುವ ಭೀತಿ ಉಂಟಾಗಿದೆ. ದೇವರಹಳ್ಳಿ- ಏನೆಕಲ್ಲು ಸಂಚಾರವು ಬಂದ್ ಆಗಿದೆ.

ಕಲ್ಲಾಜೆ ಹೊಳೆಯಲ್ಲಿ ಹೂಳು ತುಂಬಿರುವುದರಿಂದ ನೀರಿನ ಸರಾಗ ಹರಿವಿಗೆ ತಡೆಯಾಗಿ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಲೋಕೇಶ್, ಮಹೇಶ್ , ಯಶೋಧರ ಮಾಣಿಬೈಲು, ರಾಘವ ಮಾಣಿಬೈಲು ಮೊದಲಾದವರ ಕೃಷಿ ತೋಟ ಜಲಾವೃತಗೊಂಡಿದೆ. ಯಶೋಧರ ಹಾಗೂ ಚಂದ್ರಕಲಾ ಎಂಬರ ಮನೆಗೆ ನೀರು ಆವರಿಸುವ ಬೀತಿ ಎದುರಾಗಿದೆ. ಕಳೆದ ವರ್ಷವೂ ಈ ಭಾಗದಲ್ಲಿ ತೋಟಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು.