ಬೊಳುಗಲ್ಲು ಕೃಷಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ

0

ಅಪಾರ‌ ಕೃಷಿ‌‌ ಹಾನಿ : ಆನೆಗಳನ್ನು ದಟ್ಟಾರಣ್ಯಕ್ಕೆ ಸ್ಥಳಾಂತರ ಮಾಡಲು ಒತ್ತಾಯ

ಮಂಡೆಕೋಲು‌ ಗ್ರಾಮದಲ್ಲಿ ‌ಮತ್ತೆ‌ ಕಾಡಾನೆಗಳ ಹಿಂಡು‌ ಸದ್ದು ಮಾಡಲು‌ ಆರಂಭಿಸಿದೆ. ಕಳೆದ ವಾರ ಕೃಷಿ‌ತೋಟಕ್ಕೆ ಬಂದಿದ್ದ‌ ಆನೆಗಳ ಹಿಂಡು ಕನ್ಯಾನ ಶಾಲೆಯ ಕಾಂಪೌಂಡ್ ಹಾನಿಗೊಳಿಸಿದ್ದರೆ, ಇದೀಗ ಕೃಷಿ ತೋಟ ಪುಡಿಗಟ್ಟಿದೆ.

ಮಂಡೆಕೋಲು ಗ್ರಾಮದ ಬೊಳುಗಲ್ಲು ಶುಭಕರರ ಕೃಷಿ ತೋಟಕ್ಕೆ ಕಾಡಾನೆಗಳ ಹಿಂಡು‌ ಜು.25ರಂದು ರಾತ್ರಿ ಬಂದು ತೋಟ ಪುಡಿಗಟ್ಟಿರುವುದಾಗಿ ತಿಳಿದುಬಂದಿದೆ.

ಕಾಡಾನೆಗಳ ಹಿಂಡು ನಾಡಿಗೆ ಬಂದು‌ ತೋಟ ಪುಡಿಗಟ್ಟಿ ಕೃಷಿ ಹಾನಿಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಇಲಾಖೆಯವರು ದಟ್ಟಾರಣ್ಯಕ್ಕೆ ಅಟ್ಟುವ ಕೆಲಸ ಮಾಡಬೇಕು ಎಂದು ಶುಭಕರರು‌ ಸುದ್ದಿಗೆ ತಿಳಿಸಿದ್ದಾರೆ.