ಅಜ್ಜಾವರ : ವಿಶೇಷ ಚೇತನರ ಸಭೆ

0

ಅಜ್ಜಾವರ ಗ್ರಾಮ ಪಂಚಾಯತಿನಲ್ಲಿ ವಿಶೇಷಚೇತನರ ಸಭೆ ಆ.5 ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ಬೆಳಕು ವಿಶೇಷಚೇತನರ ಸಂಜೀವಿನಿ ಸ್ವ ಸಹಾಯ ಸಂಘ ರಚನೆಗೊಂಡಿತು. ತಾಲೂಕಿನ ಎಂ.ಆರ್.ಡಬ್ಲ್ಯು ಚಂದ್ರಶೇಖರ, ತಾಲೂಕಿನ ಎನ್.ಆರ್ ಎಲ್ ಎಂ ವಲಯ ಮೇಲ್ವಿಚಾರಕರು ಅವಿನಾಶ್, ಅಜ್ಜಾವರ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಸತ್ಯವತಿ ಬಸವನ ಪಾದೆ, ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಜಯಮಾಲಾ , ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲ ಎ., ದಿವ್ಯ ಪಡ್ಡಂಬೈಲು , ಗ್ರಂಥಾಲಯ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ಶಿರಾಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಕಲಚೇತನರ ಬಗ್ಗೆ ಚಂದ್ರಶೇಖರ ಮಾಹಿತಿ ನೀಡಿದರು. ಸ್ವ ಸಹಾಯ ಸಂಘದ ಉದ್ದೇಶವನ್ನು ಅವಿನಾಶ್ ಸದಸ್ಯರಿಗೆ ತಿಳಿಸಿದರು.


ಬೆಳಕು ವಿಶೇಷಚೇತನ ಸಂಜೀವಿನಿ ಸಂಘದ ಸದಸ್ಯರನ್ನು ಗ್ರಂಥಾಲಯ ದಲ್ಲಿ ಸದಸ್ಯತ್ವ ನೋಂದಣಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಉಮ್ಮರ್ ಮೊದಲಾದವರಿದ್ದರು. ಎಂ.ಬಿ.ಕೆ. ಜಯಶ್ರೀ ಸ್ವಾಗತಿಸಿದರು. ಗ್ರಂಥ ಪಾಲಕಿ ಕುಮಾರಿ ಲಕ್ಷ್ಮಿ, ಧನ್ಯವಾದ ಮಾಡಿದರು.