ಸಾಲಮನ್ನಾ ಪರಿಹಾರ ವಂಚಿತರಿಗೆ ನ್ಯಾಯಕ್ಕಾಗಿ ಭಾಕಿಸಂ ಪ್ರಯತ್ನ

0

2018ರಲ್ಲಿ ಆಗಿನ ಕರ್ನಾಟಕ ಸರಕಾರ ಕೊಡಮಾಡಿದ ರೈತರ ರೂ. 1 ಲಕ್ಷ ವರೆಗಿನ ಸಾಲಮನ್ನಾ ಆದೇಶದಲ್ಲಿ ಇನ್ನೂ ಹಲವು ರೈತರಿಗೆ ಆ ಮೊಬಲಗು ಸಿಗಲು ಬಾಕಿಯಿದೆ. ಈ ವಿಚಾರವಾಗಿ ಸುಳ್ಯ ತಾಲೂಕಿನ ರೈತರಿಗೆ ನೆರವಾಗಲು ಭಾಕಿಸಂ ಸುಳ್ಯ ತಾಲೂಕು ಚಿಂತಿಸುತ್ತಿದ್ದು, ಈ ಕುರಿತು ಆ. 5ರಂದು ಬಾಳಿಲ ಸೊಸೈಟಿ ವಠಾರದಲ್ಲಿ ಮಾಹಿತಿ ಸಭೆ ನಡೆಯಿತು.

ಸಂಘದ ತಾಲೂಕು ಅಧ್ಯಕ್ಷರಾದ ಎನ್.ಜಿ ಪ್ರಭಾಕರ ರೈ ಸಭಾಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಕಾರ್ಯದರ್ಶಿ ನೆಟ್ಟಾರು ಗೋಪಾಲಕೃಷ್ಣ ಭಟ್ ಆ ಕುರಿತು ಮಾಹಿತಿ ನೀಡಿದರು. ಬಾಳಿಲ – ಮುಪ್ಪೆರ್ಯ ಸಮಿತಿ ಅಧ್ಯಕ್ಷರಾದ ಸಿ.ವಿ ರಾಜಾರಾಮ ವಂದಿಸಿದರು.