ಅಪಾಯಕ್ಕೆ ಆಹ್ವಾನ ನೀಡುತ್ತಿದೆ ನಗರದ ರಸ್ತೆ ಬದಿಯ ಕಾಡು ಪೊದೆಗಳು

0

ಸುಳ್ಯದ ವಿವೇಕಾನಂದ ಸರ್ಕಲ್ ನಿಂದ ಕಾಂತಮಂಗಲ ಕಡೆಗೆ ಸಂಚರಿಸುವ ರಸ್ತೆಯ ಎರಡು ಬದಿಯಲ್ಲಿ ಕಾಡು ಪೊದೆಗಳಿಂದ ಕೂಡಿಕೊಂಡಿದ್ದು ವಾಹನ ಸವಾರರಿಗೆ ಹಾಗೂ ‌ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ರಸ್ತೆಯ ತಿರುವುಗಳಲ್ಲಿ ಸ್ಪಷ್ಟವಾಗಿ ಗೋಚರವಾಗದಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ರಸ್ತೆ ಬದಿಯ ಕಾಡು ಪೊದೆಗಳನ್ನು ಕಡಿದು ಸ್ವಚ್ಛ ಗೊಳಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಇದರ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಅಥವಾ ಇಲಾಖೆಯ ಅಧಿಕಾರಿಗಳು ಸ್ಪಂದಿಸಿ ಕಾರ್ಯ ಪ್ರವೃತ್ತರಾಗುವಂತೆ ಈ ಭಾಗದ ನಾಗರಿಕರು ಆಗ್ರಹಿಸಿರುತ್ತಾರೆ.