ಮಡಪ್ಪಾಡಿ : ಅಕ್ಷಯ ಸಂಜೀವಿನಿ ವತಿಯಿಂದ ಮಾಹಿತಿ ಕಾರ್ಯಕ್ರಮ

0

ಮಡಪ್ಪಾಡಿಯ ಅಕ್ಷಯ ಸಂಜೀವಿನಿ ವತಿಯಿಂದ ಒಕ್ಕೂಟ ಸಭೆ, ಕೆನರಾ ಬ್ಯಾಂಕಿನ ಮಾಹಿತಿ ಹಾಗೂ ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಕಾಯಕ್ರಮ ಆ.17ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಪಿಡಿಓ ಕೀರ್ತಿಪ್ರಸಾದ್, ಎನ್ ಆರ್ ಎಲ್ ಎಂ ಉದ್ಯೋಗ ಖಾತರಿ ಅಡಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ಸಲಹೆ ನೀಡದರು. ತಾಲೂಕು ಎನ್.ಆರ್.ಎಲ್.ಎಂ.ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ
ಶ್ವೇತರವರು ಮಾತನಾಡಿ ಸಂಜೀವಿನಿಯ ವಿವಿಧ ಯೋಜನೆಗಳು, ಲೋಕೋಸ್ ಆ್ಯಪ್ ಬಗ್ಗೆ ಮಾಹಿತಿ ನೀಡಿದರು.
ಸುಜಾತರವರು ಮಾತನಾಡಿ ಜನ್ ಧನ್ ಖಾತೆ ಬಗ್ಗೆ ಲೋಕೋಸ್ ಎಂಟ್ರಿ ಬಗ್ಗೆ ಮಾಹಿತಿ ನೀಡಿದರು.


ಉದ್ಯೋಗ ಖಾತರಿ ಬಗ್ಗೆ ವಿವರವಾದ ಮಾಹಿತಿಯನ್ನು
ನಮಿತಾರವರು ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಜೀವಿನಿ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಉಪಾಧ್ಯಕ್ಷೆ ಉಷಾ ಜಯರಾಮ ಹಾಗೂ ಓಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸಂಜೀವಿನಿ ಸದಸ್ಯರು, ಪಂಚಾಯತ್ ನ ಸಿಬ್ಬಂದಿಗಳು, ಅಮೂಲ್ಯ ಸಾಕ್ಷರತಾ ಕೇಂದ್ರದ ಕೆನರಾ ಬ್ಯಾಂಕಿನ ಆಪ್ತ ಸಮಾಲೋಚಕಿ ಸುಜಾತ, ಎಂಬಿಕೆ, ಎಲ್ ಸಿ ಆರ್ ಪಿಗಳು, ಕೃಷಿ ಸಖಿ, ಪಶು ಸಖಿಗಳು ಹಾಜರಿದ್ದ ರು.