ಕಲ್ಪವಿತ್ರ ಡ್ರೈ ಫ್ರುಟ್ಸ್ ಮತ್ತು ಸ್ಪೈಸಸ್ ಮಾರುಕಟ್ಟೆಗೆ

0

ನಾಗರ ಪಂಚಮಿಯಂದು ಸುಬ್ರಹ್ಮಣ್ಯದಲ್ಲಿ ಕಲ್ಪವಿತ್ರ ಸ್ಟಾಲ್ ಶುಭಾರಂಭ

ಸುಳ್ಯ ಕಲ್ಪತರು ಕಾಂಪ್ಲೆಕ್ಸ್ ಮಾಲಕಬಿ.ಎಲ್.
ಶಿವರಾಮ ರವರ ಕಲ್ಪತರು ಕ್ಯಾಶ್ಯೂ ಇಂಡಸ್ಟ್ರೀಸ್ ನಲ್ಲಿ ತಯಾರಾದ ಪೌಷ್ಟಿಕ ತೆಯ ಗೋಡಂಬಿ ಹಾಗೂ ಕಲ್ಪವಿತ್ರ ಡ್ರೈ ಫ್ರುಟ್ಸ್ ಮತ್ತು ಸ್ಪೈಸಸ್ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.

ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಹೊಸ ಉತ್ಪನ್ನಗಳ ಡ್ರೈ ಫ್ರುಟ್ಸ್ ಪ್ಯಾಕೆಟ್ ನ್ನು ಮಾರುಕಟ್ಟೆ ಗೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆನಂದ್ ಇಲೆಕ್ಟ್ರಿಕಲ್ಸ್ ಮಾಲಕ ಆನಂದ ಪೂಜಾರಿ, ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು, ಸಂಸ್ಥೆಯ ಪಾಲುದಾರ ಮುಖೇಶ್ ಬಿ.ಎಸ್ ಉಪಸ್ಥಿತರಿದ್ದರು.


ಸಂಸ್ಥೆಯಲ್ಲಿ ಗೋಡಂಬಿ, ಮಸಾಲ ಗೋಡಂಬಿ, ಬಾದಾಮ್, ಒಣದ್ರಾಕ್ಷಿ, ಪಿಸ್ತಾ, ಊರು ಜೇನು, ಶುದ್ಧ ಕೊಬ್ಬರಿ ಎಣ್ಣೆ, ಕೊಬ್ಬರಿ, ಮಶ್ ರೂಂ ಪೌಡರ್ ಉತ್ಪನ್ನಗಳು ದೊರೆಯುತ್ತದೆ.


ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸುಬ್ರಹ್ಮಣ್ಯದಲ್ಲಿ ಕಲ್ಪ ವಿತ್ರ ಸ್ಟಾಲ್ ಶುಭಾರಂಭಗೊಂಡಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಕೇಂದ್ರ ಭಾಗಗಳಲ್ಲಿ ಕಲ್ಪವಿತ್ರ ಸ್ಟಾಲ್ ಗಳನ್ನು ತೆರಯಲಾಗುವುದು ಎಂದು ಪಾಲುದಾರ ಮುಖೇಶ್ ಬಿ.ಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಅನಿಲ್ ಕುಮಾರ್ ರವರು ತಿಳಿಸಿದರು.