ಡಾlರವಿ ಕಕ್ಕೆ ಪದವು ಸೇವಾ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

0

ಸುಬ್ರಹ್ಮಣ್ಯದ ಡಾlರವಿ ಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಬಿಳಿನೆಲೆ ಗ್ರಾಮದ ಕೈಕಂಬ ಕುಕ್ಕಜೆ ನಿವಾಸಿ ತೀರ ಬಡತನದಲ್ಲಿರುವ ಸುಮಿತ್ರ ಅವರಿಗೆ ನೂತನವಾಗಿ ಕಟ್ಟಿಕೊಟ್ಟ ಮನೆಯನ್ನ ಆ.24. ರಂದು ಮನೆಯ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು.

   

ರವಿ ಕಕ್ಕೆಪದವ್ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಚಂದ್ರಕಲಾ ,ರಮೇಶ ಹೊಸಳ್ಳಿಕೆ ಹಾಜರಿದ್ದರು .ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸುಮಿತ್ರ ಅವರಿಗೆ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು ಹಾಗೂ ಸರ್ವ ಸದಸ್ಯರ ಮುಖಾಂತರ ಕಿರು ಕಾಣಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷರಾದ ಗೋಪಾಲ ಎಣ್ಣೆಮಜಲು, ವಿಶ್ವನಾಥ ನಡುತೋಟ ಬಾಲಕೃಷ್ಣ ಪೈ, ಮೈಲಪ್ಪ ಸಂಕೇಶ ,ಚಂದ್ರಶೇಖರ ನಾಯರ್ ,ಕಾರ್ಯದರ್ಶಿ ಮೋಹನ್ದಾಸ್ ಎಣ್ಣೆ ಮಜಲು ಮುಂತಾದವರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ರವಿ ಕಕ್ಕೆಪದವು ಸೇವಾ ಟ್ರಸ್ಟಿನ ಸಂಸ್ಥಾಪಕರಾದ ಡಾ lರವಿ ಕಕ್ಕೆ ಪದವು ಅವರನ್ನು ಮನೆಯವರ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಪೂರ್ವ ಅಧ್ಯಕ್ಷರಾದ ವಿಶ್ವನಾಥ ನಡುತೋಟ ನಿರೂಪಿಸಿ ಸ್ವಾಗತಿಸಿದರು. ಗೋಪಾಲ ಎಣ್ಣೆಮಜಲ್ ವಂದಿಸಿದರು.