ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅವರ ಕಚೇರಿ ಕಾರ್ಯಾರಂಭ : ಪೆರಾಜೆಯ ಪ್ರಮುಖರು ಭಾಗಿ

0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರು ಹಾಗೂ ಕೊಡಗಿನ ವಿರಾಜಪೇಟೆ ಶಾಸಕರಾದ ಎ ಎಸ್ ಪೊನ್ನಣ್ಣ ಅವರ ನೂತನ ಕಚೇರಿ ಬೆಂಗಳೂರಿನ ವಿಧಾನ ಸೌಧದಲ್ಲಿ ಕಾರ್ಯಾರಂಭ ಮಾಡಿತು. ಈ ಸಂದರ್ಭದಲ್ಲಿ ಪೆರಾಜೆಯ ಕಾಂಗ್ರೆಸ್ ನ ನಾಯಕರು ಭಾಗಿಯಾಗಿ, ಶುಭ ಹಾರೈಸಿ, ಪೆರಾಜೆ ಗ್ರಾಮದ ಅಭಿವೃದ್ಧಿ ಕುರಿತು ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.