ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಸ್ರೋ ಸಂಸ್ಥೆಯ ಅಡಿಷನಲ್ ಸೆಕ್ರೆಟರಿ ಸಂಧ್ಯಾ ವಿ.ಶರ್ಮಾ ಭೇಟಿ

0

ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವಾಲಯಕ್ಕೆ ಇಸ್ರೋ ಸಂಸ್ಥೆಯ ಅಡಿಷನಲ್ ಸೆಕ್ರಟರಿ (ಡೈರೆಕ್ಟರ್) ಸಂಧ್ಯಾ ವಿ. ಶರ್ಮ ಐ.ಎ.ಎಸ್. ಅವರು ಸೆ.1 ರಂದು ದೇವಾಲಯಕ್ಕೆ ಭೇಟಿ ನೀಡಿದರು.

ಇಸ್ರೋ ಸಂಸ್ಥೆಯ ಸೂರ್ಯ ಗ್ರಹದ ಅಧ್ಯಯನದ ಅಂಗವಾಗಿ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್1 ಉಪಗ್ರಹವು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಪ್ರಾರ್ಥನೆ ಮಾಡಲಾಯಿತು. ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ದೇವಾಲಯದ ವತಿಯಿಂದ ಇಸ್ರೋ ಸಂಸ್ಥೆಗೆ ಅಭಿನಂದನಾ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಮೋಹನ ರಾಂ ಸುಳ್ಳಿ, ಟ್ರಸ್ಟಿ ವನಜಾ ಭಟ್,ಶೋಭಾ ಗಿರಿಧರ್,ಪ್ರಸನ್ನ ದರ್ಬೆ,ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್ ಕುಕ್ಕೆ ಉಪಸ್ಥಿತರಿದ್ದರು.