ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಮಹಾಸಭೆ

0


ನೂತನ ಪದಾಧಿಕಾರಿಗಳ ಆಯ್ಕೆ


ಅಧ್ಯಕ್ಷ: ಈಶ್ವರ್ ವಾರಣಾಶಿ, ಕಾರ್ಯದರ್ಶಿ: ಜಯಶ್ರೀ ಕೊಯಿಂಗೋಡಿ, ಕೋಶಾಧಿಕಾರಿ :ವಿನಯ್ ಜಾಲ್ಸೂರು


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಮಹಾಸಭೆಯು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಇಂದು(ಸೆ.೪ರಂದು) ನಡೆಯಿತು. ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಉಪಾಧ್ಯಕ್ಷ ಶರೀಫ್ ಜಟ್ಟಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ನೀರಬಿದಿರೆ ವರದಿ ವಾಚಿಸಿದರು. ಕೋಶಾಧಿಕಾರಿ ಜಯಶ್ರೀ ಕೊಯಿಂಗೋಡಿ ಲೆಕ್ಕಪತ್ರ ಮಂಡಿಸಿದರು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಆಲೆಟ್ಟಿ, ಅಧ್ಯಕ್ಷರಾಗಿ ಈಶ್ವರ್ ವಾರಣಾಶಿ, ಕಾರ್ಯದರ್ಶಿಯಾಗಿ ಜಯಶ್ರೀ ಕೊಯಿಂಗೋಡಿ, ಕೋಶಾಧಿಕಾರಿಯಾಗಿ ವಿನಯ್ ಜಾಲ್ಸೂರು, ಉಪಾಧ್ಯಕ್ಷರಾಗಿ ಯಶ್ವಿತ್ ಕಾಳಂಮನೆ, ಶಿವರಾಮ ಕಜೆಮೂಲೆ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕುಕ್ಕುದಡಿ, ಪೂಜಾಶ್ರೀ ಪೈಚಾರ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ್ ಕಜೆಗದ್ದೆ, ಕ್ರೀಡಾ ಕಾರ್ಯದರ್ಶಿಯಾಗಿ ಭಾಗೀಶ್ ಕೆ.ಟಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಾಯತ್ರಿ ಪ್ರಶಾಂತ್ ಪೆರಾಜೆ ಆಯ್ಕೆಯಾದರು.


ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮೇಶ್ ಮಣಿಕ್ಕರ, ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಅನಿಲ್ ಕಳಂಜ, ವಿನಯ್ ಕಲ್ಮಡ್ಕ, ಕುಶಾಂತ್ ಕೊರತ್ಯಡ್ಕ, ರಶೀದ್ ಬೆಳ್ಳಾರೆ, ಸಂಕಪ್ಪ ಸಾಲ್ಯಾನ್, ಮಧು ಪಂಜ, ಶ್ರೀಧಾಮ ಅಡ್ಕಾರ್, ರಕ್ಷಿತ್ ಆನೆಕಾರ, ಯತೀಶ್ ಕದ್ರ, ರೇಖಾ ಸುಭಾಶ್, ಮಂಜುನಾಥ ಪೈಯವರನ್ನು ಆಯ್ಕೆ ಮಾಡಲಾಯಿತು.