ಸುಳ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ

0

ಸುಳ್ಯ ಲಯನ್ಸ್ ಕ್ಲಬ್ ಗೆ ಲಯನ್ಸ್
ಪ್ರಾಂತೀಯ ಅಧ್ಯಕ್ಷೆ ಲ. ಸದಾನಂದ ಜಾಕಿಯವರ ಅಧಿಕೃತ ಭೇಟಿ ಕಾರ್ಯಕ್ರಮ ಸೆಪ್ಟೆಂಬರ್ 23ರಂದು ಲಯನ್ ಸೇವಾ ಸದನದಲ್ಲಿ ನಡೆಯಿತು.


ಲಯನ್ಸ್ ಕ್ಲಬ್ ಸುಳ್ಯ ಘಟಕದ ಅಧ್ಯಕ್ಷ ಲ. ವೀರಪ್ಪ ಗೌಡ ಕಣ್ಕಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಾಂತೀಯ ಅಧ್ಯಕ್ಷೆ ಲ. ರೇಣುಕಾ ಸದಾನಂದರು ಉದ್ಘಾಟಿಸಿದರು.


ಘಟಕದ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ವರದಿ ವಾಚಿಸಿದರು. ಕ್ಲಬ್ ನ ಸಂಚಿಕೆ ಸುವರ್ಣೋತ್ತರವನ್ನು ರೇಣುಕಾ ಸದಾನಂದ ರವರು ಬಿಡುಗಡೆ ಮಾಡಿದರು. ಸಂಚಿಕೆಯ ಸಂಪಾದಕರಾದ ಲೀಲಾ ದಾಮೋದರ್ ರವರು ಸಂಚಿಕೆಯ ಪರಿಚಯ ಮಾಡಿದರು.
ಬಳಿಕ ಜಗನ್ನಾಥ ರೈ, ಸೋಮಶೇಖರ ರೈ ಮತ್ತು ಜಯಂತ ಶೆಟ್ಟಿ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಶಟಲ್ ಟೂರ್ನಮೆಂಟ್ ನ ವರದಿ ಹಾಗೂ ಬಹುಮಾನ ವಿತರಣೆ ನಡೆಯಿತು.


ಪ್ರಾಂತೀಯ ಅಧ್ಯಕ್ಷರನ್ನು ಲ. ಕೆ.ಟಿ. ವಿಶ್ವನಾಥ್ ಪರಿಚಯಿಸಿದರು. ಬಳಿಕ ಮಾತನಾಡಿದ ಲ.ರೇಣುಕಾ ಸದಾನಂದ ಜಾಕೆಯವರು ಮುಂದೆ ನಡೆಯಲಿರುವ ಪ್ರಾಂತೀಯ ಸಮಾವೇಶ ದಿಶಾನಿ ಕುರಿತು ವಿವರಿಸಿದರು. ಕ್ಲಬ್ಬಿನ ಪರವಾಗಿ ರೇಣುಕಾರವರನ್ನು ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು. ಬಳಿಕ ಅಧ್ಯಕ್ಷೀಯ ಭಾಷಣ ಮಾಡಿದ ವೀರಪ್ಪ ಗೌಡರು ಪ್ರಾಂತೀಯ ಅಧ್ಯಕ್ಷರ ಕಾರ್ಯ ಶೈಲಿಯನ್ನು ಶ್ಲಾಘಿಸಿದರು.
ಲ. ಸದಾನಂದ ಜಾಕೆ, ರೀಜನ್ ಅಂಬಾಸಿಡರ್ ಲ. ಬಾಲಚಂದ್ರ ಗೌಡ, ರೀಜನ್ ಕೋಆರ್ಡಿನೇಟರ್ ಲ. ಡಾ. ಪ್ರಕಾಶ್ ಡಿಸೋಜ ಹಾಗೂ ಝೋನ್ ಚೇರ್ ಪರ್ಸನ್ ಲ. ಸಂತೋಷ್ ಜಾಕೆ, ಶುಭಾಶಂಸನಾ ಮಾತುಗಳನ್ನಾಡಿದರು. ಝೋನ್ ಕೋಆರ್ಡಿನೇಟರ್ ಲ. ಥೋಮಸ್ ಕೆ. ಎಸ್., ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದಿಲೀಪ್ ಬಾಬ್ಲುಬೆಟ್ಟು, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಜಯರಾಮ ಕಡ್ಲಾರು, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಯೋಗೇಶ್ವರ್, ಬೆಳ್ಳಾರೆ ಜಲದುರ್ಗ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ವಿಠಲ ಶೆಟ್ಟಿ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ರಾಮಚಂದ್ರ ಪಳಂಗಾಯ, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಗೋಪಾಲಕೃಷ್ಣರು ವೇದಿಕೆಯಲ್ಲಿದ್ದರು.
ಸುಳ್ಯ ಘಟಕದ ಖಜಾಂಜಿ ಲ. ಕಿರಣ್ ನೀರ್ಪಾಡಿ ವಂದಿಸಿದರು. ಲ.ತೇಜಸ್ವಿನಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.