ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿಯ ನಗದು ವಿತರಣೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ
ಮರಣ ಸಾಂತ್ವನ ನಿಧಿಯ ನಗದು ವಿತರಣೆ ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರ ಮನೆಗಳಲ್ಲಿ ಜರುಗಿತು.
ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರಾದ ಕಿಟ್ಟಣ್ಣ ನಾಯ್ಕ ಪಲ್ಲತ್ತಡ್ಕ, ಸುಬ್ಬಯ್ಯ ಶೆಟ್ಟಿ ಚಾಲ್ಯಾರು, ಯಶವಂತ ಎ.ಕೆ ಅಳ್ಪೆ, ಭಾಸ್ಕರ ನಾಯ್ಕ ಚೀಮುಳ್ಳು ರವರ ಮನೆಯವರಿಗೆ ಸಂಘದ ಮರಣ ಸಾಂತ್ವನ ನಿಧಿಯಿಂದ ತಲಾ ರೂ.5000 ನಗದು ಹಸ್ತಾಂತರಿಸಿದರು.


ಸಂಘದ ಅಧ್ಯಕ್ಷ ಗಣೇಶ್ ಪೈ, ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ,ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ, ಚಿನ್ನಪ್ಪ ಚೊಟ್ಟೆಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.