ಅರಂತೋಡು: ದನಗಳಿಗೆ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ

0

ದನಗಳಿಗೆ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವು ಅರಂತೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಮಾಲಿನಿ ವಿನೋದ್ ಉಳುವಾರು ಅವರ ಮನೆಯಲ್ಲಿ ಅ.5ರಂದು ನಡೆಯಿತು.

ಗ್ರಾಮ ಪಂಚಾಯತಿ ಅದ್ಯಕ್ಷ ಕೇಶವ ಆಡ್ತಲೆ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅದ್ಯಕ್ಷ ಶೇಷಗಿರಿ ಯು. ಎಂ. ಉಪಾಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ನಿರ್ದೇಶಕರಾದ ಕೆ.ಸಿ. ನಾರಾಯಣ ಕುಯಿಂತೋಡು, ಮೋಹನ ಕಿನಾಲ, ತೇಜಕುಮಾರ್, ಸಂಘದ ಸದಸ್ಯರಾದ ಕಿರಣ್ ಸಣ್ಣಮನೆ , ಕಾರ್ಯದರ್ಶಿ ಶ್ರೀಮತಿ ವಿಮಲಾ ಸೋಮಶೇಖರ್ ಹಾಗೂ ಪಶು ವೈದ್ಯರಾದ ಪಾಲಾಕ್ಷ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.