ಮಾಜಿ ಪ್ರಧಾನಿ ದೇವೇ ಗೌಡ ದಂಪತಿ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ

0

ಆಶ್ಲೇಷ ಬಲಿ, ಮಾಹಾಪೂಜೆಯಲ್ಲಿ ಭಾಗಿ

ಪತ್ನಿಯ ಜೊತೆಗೂಡಿ ತುಲಾಭಾರ ಸೇವೆ

ಮಾಜಿ ಪ್ರಧಾನಿ ದೇವೇ ಗೌಡರು ಪತ್ನಿ ಚೆನ್ನಮ್ಮ ದಂಪತಿ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಆಗಮಿಸಿದ ಆಶ್ಲೇಷ ಬಲಿ, ತುಲಾಭಾರ, ಮಹಾಪೂಜೆಯಲ್ಲಿ ಭಾಗಿಯಾದರು.

ಸಹಾಯಕರ ಸಹಾಯದಿಂದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ದಂಪತಿಗಳು ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಉಪಹಾರ ಸೇವಿಸಿದ ಅವರು ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು. ದೇವೆ ಗೌಡರು 85 ಕೆ.ಜಿ ತೂಗಿದರೆ ಪತ್ನಿ 65 ಕೆ.ಜಿ ತೂಗಿದರು. ಬೆಲ್ಲ,ಕಡ್ಲೆ ಬೇಳೆ, ತೆಂಗಿನಕಾಯಿಯಲ್ಲಿ ತುಲಾಭಾರ ನಡೆಸಲಾಯಿತು.

ದೇವಸ್ಥಾನದ ಆನೆ ಯಶಸ್ವಿನಿ ಯಿಂದ ಆಶೀರ್ವಾದ ಪಡೆಯಲಾಯಿತು. ಮಹಾಪೂಜೆಯಲ್ಲಿ ಪಾಲ್ಗೊಂಡು ವಾಪಾಸು ತೆರಳಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ ಭಟ್, ಜೆ.ಡಿ‌.ಎಸ್ ಮುಖಂಡ ಎಂ.ಬಿ ಸದಾಶಿವ, ಕೆಲ ಜೆ.ಡಿ.ಎಸ್. ಮುಖಂಡರು ಜತೆಗಿದ್ದರು‌. ಶಿಷ್ಟಾಚಾರ ವಿಭಾಗದ ಜಯರಾಮ ರಾವ್, ಪ್ರಮೋದ್, ನವೀನ್, ಹರೀಶ್ ಮತ್ತಿತರರು ದೇವಸ್ಥಾನ ವ್ಯವಸ್ಥೆ ನೋಡಿಕೊಂಡರು. ಸುಬ್ರಹ್ಮಣ್ಯ ಪೋಲಿಸರು ಭದ್ರತೆ, ಇಲಾಖಾ ಅಧಿಕಾರಿಗಳು ಇತರೇ ಉಸ್ತುವಾರಿ ನೋಡಿಕೊಂಡರು.