ಬೂಡು ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ‌ಜಾಗೃತಿ

0

ಪಯಸ್ವಿನಿ ಯುವಕ ಮಂಡಲ ಕೇರ್ಪಳ ಹಾಗೂ ಪ್ರಕೃತಿ ಯುವಕ ಸಂಘದಿಂದ ಬೂಡು ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮ ಅ.17 ರಂದು‌ ಬೆಳಗ್ಗೆ ನಡೆಯಿತು.

ಪಯಸ್ವಿನಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಶಿವರಾಮ ಕೇರ್ಪಳ ಅಭಿಯಾನಕ್ಕೆ ಚಾಲನೆ ‌ನೀಡಿ, ಶುಭಹಾರೈಸಿದರು.

ನಗರ ಪಂಚಾಯತ್ ಸದಸ್ಯರುಗಳಾದ ರಿಯಾಜ್ ಕಟ್ಟೆಕಾರ್, ಸುಧಾಕರ ಕುರುಂಜಿಭಾಗ್, ಪೂಜಿತಾ ಕೆ.ಯು., ಬೂಡು ಅಂಗನವಾಡಿ ಕಾರ್ಯಕರ್ತೆ ಕವಿತಾ ಸಹಿತ ಸುಮಾರು 25 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಮಧುಸೂದನ್ ಬೂಡು ಸ್ವಾಗತಿಸಿದರು. ವಿನ್ಯಾಸ್ ಕುರುಂಜಿ ವಂದಿಸಿದರು.

ಸುಮಾರು ಒಂದು ಗಂಟೆ ಕಾಲ ಬೂಡು ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು.