ಅಜ್ಜಾವರ: 1753 ನೇ ಮದ್ಯವರ್ಜನ ಶಿಬಿರ

0


123 ಮಂದಿ ಶಿಬಿರಾರ್ಥಿಗಳು

ಧರ್ಮಸ್ಥಳ ಕ್ಷೇತ್ರದ ಪುಣ್ಯ ಕಾರ್ಯ ಮದ್ಯವರ್ಜನ ಶಿಬಿರಕ್ಕೆ ಪೂರಕವಾಗಿ ಸರಕಾರವೇ ಮದ್ಯನಿಷೇಧ ಮಾಡುವ ಕಾರ್ಯಕ್ಕೆ ಮುಂದೆ ಬರಲಿ: ಪದ್ಮನಾಭ ಸ್ವಾಮೀಜಿ ಮೇನಾಲ

ಅಜ್ಜಾವರ ಮಹಿಷಿ ಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ 1753 ನೇ ಮದ್ಯವರ್ಜನ ಶಿಬಿರ ದ ಗಣ್ಯರಿಂದ ಮಾಹಿತಿ ‌ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮೇನಾಲ ಕ್ಷೇತ್ರದ ಪದ್ಮನಾಭ ಸ್ವಾಮೀಜಿಯವರು ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು.


ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ವಿಶ್ವನಾಥ ರೈ ಕಳಂಜ,‌ ತಾಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರು, ಒಕ್ಕೂಟದ ಉಪಾಧ್ಯಕ್ಷ ಧರ್ಮಪಾಲ ಕಣ್ಕಲ್, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು, ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ,
ಕಡಬ ಯೋಜನಾಧಿಕಾರಿ ಮೇದಪ್ಪ, ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೇಮರಡ್ಕ ಸುಬ್ರಹ್ಮಣ್ಯ ವಲಯ ಅಧ್ಯಕ್ಷ ಮಾಧವ ಚಾಂತಾಳ, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಜ.ಜಾ.ವೇದಿಕೆ ನಿ.ಪೂ.ವಲಯಾಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ, ಜ.ಜಾ.ವೇದಿಕೆ ಸದಸ್ಯ ವಿಜಯಕುಮಾರ್ ಉಬರಡ್ಕ, ಶೌರ್ಯ ವಿ.ನಿ.ಘಟಕದ ಮಾಸ್ಟರ್ ಸತೀಶ್ ಹಾಲೆಮಜಲು ಉಪಸ್ಥಿತರಿದ್ದರು.


ಮೇಲ್ವಿಚಾರಕರಾದ ರಾಜೇಶ್ ಸ್ವಾಗತಿಸಿದರು. ಬಾಲಕೃಷ್ಣ ಗೌಡ ವಂದಿಸಿದರು. ಸೇವಾ ಪ್ರತಿನಿಧಿ
ರಮೇಶ್ ಮೆಟ್ಟಿನಡ್ಕ ಕಾರ್ಯಕ್ರಮ ನಿರೂಪಿಸಿದರು.