ಪಾಂಡಿಚೇರಿಯಲ್ಲಿ ಮೃತಪಟ್ಟ ಬಿಪಿನ್ ಚಿದ್ಗಲ್ ಪಾರ್ಥೀವ ಶರೀರ ಹುಟ್ಟೂರಿಗೆ ಆಗಮನ

0

ನೂರಾರು ಮಂದಿಯಿಂದ ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ

ಪಾಂಡಿಚೇರಿಯಲ್ಲಿ ಸಮುದ್ರಪಾಲಾಗಿ ಮೃತಪಟ್ಟ ಪಂಜ ಚಿದ್ಗಲ್‌ನ ಬಿಪಿನ್ ಅವರ ಪಾರ್ಥವ ಶರೀರ ಇಂದು ಚಿದ್ಗಲ್ ಮನೆಗೆ ಆಗಮಿಸಿದ್ದು, ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಕೂತ್ಕುಂಜ ಗ್ರಾಮದ ಚಿದ್ಗಲ್ ಗೋಪಾಲ ಗೌಡರ ಪುತ್ರ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಶನಿವಾರ ಮಿತ್ರರೊಂದಿಗೆ ಪಾಂಡಿಚೇರಿಗೆ ತೆರಳಿದ್ದರು. ಆದಿತ್ಯವಾರ ಬೆಳಿಗ್ಗೆ ಗೆಳೆಯರೊಂದಿಗೆ ಬೀಚ್ ಗೆ ತೆರಳಿದ್ದ ವೇಳೆ ತೆರೆಯ ರಭಸಕ್ಕೆ ಸಮುದ್ರ ಪಾಲಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಅವರನ್ನು ಪತ್ತೆಹಚ್ಚಲಾಯಿತಾದರೂ ಆ ವೇಳೆಗೆ ಮೃತಪಟ್ಟಿದ್ದರು.

ಮರಣ ವಾರ್ತೆ ತಿಳಿದು ಬೆಂಗಳೂರಿನಲ್ಲಿರುವ ಬಿಪಿನ್ ಅವರ ಬಂಧುಗಳು ಮೊನ್ನೆಯೇ ಪಾಂಡಿಚೇರಿಯತ್ತ ತೆರಳಿದ್ದರು.

ನಿನ್ನೆ ಮಧ್ಯಾಹ್ನದ ವೇಳೆ ಪಾಂಡಿಚೇರಿಯಲ್ಲಿ ಮೃತ ದೇಹದ ಮಹಜರು ಮತ್ತು ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮನೆಯವರಿಗೆ ಬಿಟ್ಟು ಕೊಡಲಾಗಿದ್ದು, ಆಂಬ್ಯುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ತರಲಾಯಿತು.
ಇಂದು ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಚಿದ್ಗಲ್ ಗೆ ತಲುಪಿತು.

ನೂರಾರು ಮಂದಿ ಅಂತಿಮ ದರ್ಶನ ಪಡೆದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.