ಸುಬ್ರಹ್ಮಣ್ಯದಲ್ಲಿ ‘ವೀರ ಹನುಮಂತನೇ’ ಭಕ್ತಿಗೀತೆ ಬಿಡುಗಡೆ

0

ಭಾರತೀಯರ ಆರಾಧ್ಯ ದೈವವಾಗಿರುವ ರಾಮಭಂಟ ಹನುಮಂತನ ‘ವೀರ ಹನುಮಂತನೇ’ ಎಂಬ ಭಕ್ತಿ ಗೀತೆಯೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದಲ್ಲಿ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಕುಮಾರಸ್ವಾಮಿ ವಿದ್ಯಾಲಯದ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಚಂದ್ರಶೇಖರ್ ತಳೂರು ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಭವ್ಯ ಜೇನ್ಕೋಡಿ, ಚಂದ್ರಶೇಖರ್ ತಳೂರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಪ್ರಸಾದ್ ನಾಯರ್, ಸಂಚಾಲಕರು ಆದ ಚಂದ್ರಶೇಖರ್ ನಾಯರ್, ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ವಿದ್ಯಾರತ್ನ, ಪ್ರಾಂಶುಪಾಲರಾದ ಸಂಕೀರ್ತನ್ ಹೆಬ್ಬಾರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ನಿರಂಜನ್ ಕಡ್ಲಾರು ಇವರ ಸಾಹಿತ್ಯವಿರುವ ಈ ಭಕ್ತಿ ಗೀತೆಗೆ ಶರತ್ ಬಿಳಿನೆಲೆ ಇವರ ಸಂಗೀತವಿದೆ.ಬೇಬಿ ರಮ್ಯಾ ಶೆಟ್ಟಿ ಸುಬ್ರಹ್ಮಣ್ಯ ಮತ್ತು ಮಾಸ್ಟರ್ ಅಶ್ವಿನ್ ಆಚಾರ್ಯ ಐವರ್ನಾಡು ರವರ ಗಾಯನವಿದ್ದು ಅಂಕಿತಾ ಆಚಾರ್ಯ ಕಡ್ಲಾರುರವರ ನಿರೂಪಣಾ ಧ್ವನಿ ಇದೆ. ಇಂದುಧರ ಹಳೆಅಂಗಡಿಯವರ ಸಂಕಲನವಿದೆ ಈ ಭಕ್ತಿಗೀತೆಯನ್ನು N A Times ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.