ಪ್ರಗತಿಪರ ಕೃಷಿಕ ನವೀನ್ ಚಾತುಬಾಯಿ ಅವರಿಗೆ ಐಕಾನಿಕ್ ಆಫ್ ಇಂಡಿಯನ್ ಅವಾರ್ಡ್ 2023 ಪ್ರಶಸ್ತಿ ಪ್ರದಾನ

0

ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ. ಕೆ. ನವೀನ್ ಚಂದ್ರ ಚಾತುಬಾಯಿ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ 2023ರ “ಐಕಾನಿಕ್ ಆಫ್ ಇಂಡಿಯನ್ ಅವಾರ್ಡ್” ಪ್ರಶಸ್ತಿ ಲಭಿಸಿದೆ.
ನ.10ರಂದು ಮಂಗಳೂರಿನ ರಾಣಿ ಅಬ್ಬಕ್ಕ ವಿಹಾರನೌಕೆಯಲ್ಲಿ ನಡೆದ 42ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ (ICFC) ಮುಖ್ಯಸ್ಥರಾದ ಕೆ. ಪಿ. ಮಂಜುನಾಥ ಸಾಗರ್, ಬೆಹರೆನ್ ಕನ್ನಡ ಸಂಘದ ಅಧ್ಯಕ್ಷ ರಾಜಕುಮಾರ ಭಾಸ್ಕರ್, ಪೊಲೀಸ್ ಅಧಿಕಾರಿ ಗೋಪಾಲಕೃಷ್ಣ ಬಜ್ಪೆ, ಕೆ.ಎ.ಎಸ್. ಅಧಿಕಾರಿ ಜಿ. ಕುಮಾರ ನಾಯ್ಕ್, ಮಾಧವರಾವ್ ಮಂಗಳೂರು, ರೇಣುಕಾ ಪ್ರಸಾದ್ ರಾಮನಗರ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ನೌಕೆಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.