ನ ಪಂ ಸದಸ್ಯ ಎಂ. ವೆಂಕಪ್ಪ ಗೌಡರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಸಿಹಿ ತಿಂಡಿ ವಿತರಣೆ

0

ದೀಪಾವಳಿ ಹಬ್ಬದ ಅಂಗವಾಗಿ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ತಮ್ಮ ವಾರ್ಡ್ ಕೆರೆ ಮೂಲೆ, ನಗರ ಪಂಚಾಯತ್ ಕಚೇರಿ, ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸಿಹಿ ತಿಂಡಿ ವಿತರಣೆ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಸಿಹಿ ತಿಂಡಿ ವಿತರಣಾ ಕಾರ್ಯಕ್ರಮಕ್ಕೆ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಚಾಲನೆ ನೀಡಿ ಹಬ್ಬದ ಶುಭಾಶಯಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಪ್ರೆಸ್ ಕ್ಲಬ್ ಸದಸ್ಯರುಗಳು ಉಪಸ್ಥಿತರಿದ್ದರು.

ಬಳಿಕ ನಗರ ಪಂಚಾಯತಿ ಕಚೇರಿಯಲ್ಲಿ ನ ಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಸಿಹಿ ತಿಂಡಿ ವಿತರಣೆ ಮಾಡಿ ಹಬ್ಬದ ಶುಭಾಶಯ ಕೋರಿದರು.

ಬಳಿಕ ತಾನು ಪ್ರತಿನಿಧಿಸಿದ ಕೆರೆಮೂಲೆ ವಾರ್ಡಿನ ಎಲ್ಲಾ ಮನೆಗಳಿಗೂ ಭೇಟಿ ನೀಡಿ ದೀಪಾವಳಿ ಹಬ್ಬದ ಶುಭಾಶಯಗಳು ಕೋರಿ ಸಿಹಿ ತಿಂಡಿ ವಿತರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ವರ್ಷವೂ ಕೂಡ ದೀಪಾವಳಿ ಹಬ್ಬದಂದು ನನ್ನ ವಾರ್ಡಿನ ಜನತೆಯೊಂದಿಗೆ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಿದ್ದೇನೆ. ಅದೇ ರೀತಿ ಈ ಬಾರಿಯೂ ಕೂಡ ಎಲ್ಲಾ ಧರ್ಮದ ಮುಖಂಡರನ್ನು ಸೇರಿಸಿಕೊಂಡು ನನ್ನ ವಾರ್ಡಿನಲ್ಲಿ ಸಿಹಿ ತಿಂಡಿಯನ್ನು ಹಂಚಿ ಹಬ್ಬವನ್ನು ಆಚರಿಸುತ್ತಿದ್ದೇನೆ. ಇದರಿಂದ ಮನಸ್ಸಿಗೂ ಮತ್ತು ನನ್ನ ಕೆಲಸ ಕಾರ್ಯಕ್ಕೂ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಭವಾನಿ ಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ನೌಶಾದ್ ಕೆರೆಮೂಲೆ, ಷಹೀದ್ ಪಾರೆ, ಅಬ್ದುಲ್ ಕಯೂಮ್ ಮೊದಲಾದವರು ಉಪಸ್ಥಿತರಿದ್ದರು.