ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗಡಿಪಾರು ಅಸ್ತ್ರ ಪ್ರಯೋಗ

0

ರಾಜ್ಯ ಸರಕಾರದ ನಡೆಯ ವಿರುದ್ಧ ವಿ.ಹೆಚ್.ಪಿ ಬಜರಂಗದಳ ಖಂಡನೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆಯ ಮೂಲಕ ಹಿಂದೂ ಸಮಾಜದ ಕೆಲಸ ಮಾಡುತ್ತಿರುವ ಸಂಘಟನೆಯ ಜವಾಬ್ದಾರಿಯುತ ಕಾರ್ಯಕರ್ತರನ್ನು ಗಡಿಪಾರು ಆಸ್ತ್ರ ಮೂಲಕ ಕುಗ್ಗಿಸುವ,ಬೆದರಿಸುವ ಪೋಲಿಸ್ ಇಲಾಖೆಯ ಕ್ರಮವನ್ನು ಹಾಗೂ ಇದಕ್ಕೆ ಒತ್ತಡ ತರುತ್ತಿರುವ ರಾಜ್ಯ ಕಾಂಗ್ರೇಸ್ ಸರಕಾರದ ಹಿಂದೂ ವಿರೋಧಿ ನಡೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಉಗ್ರವಾಗಿ ಖಂಡಿಸುತ್ತದೆ.
ಬಜರಂಗದಳ ಜಿಲ್ಲಾ ಸಹ ಸಂಯೋಜಕ ಜವಾಬ್ದಾರಿ ಮೂಲಕ ಆನೇಕ ವರುಷಗಳಿಂದ ಹಿಂದೂ ಸಮಾಜದ ಸಂಘಟನೆಯ,ರಕ್ಷಣೆಯ ಕೆಲಸ ಮಾಡುತ್ತಿರುವ ಲತೀಶ್ ಗುಂಡ್ಯ ಇವರ ಮೇಲೆ ಗಡಿಪಾರು ಅಸ್ತ್ರ ಉಪಯೋಗಿಸಿ ಹಿಂದೂ ಸಂಘಟನೆಯನ್ನು ಹತ್ತಿಕ್ಕುವ ಕೆಲಸ ನಡೆಸುವ ಕ್ರಮವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿ.ಹೆಚ್.ಪಿ ಸುಳ್ಯ ಪ್ರಖಂಡದ ಪ್ರಧಾನ ಕಾರ್ಯದರ್ಶಿ ನವೀನ್ ‌ಎಲಿಮಲೆ ತಿಳಿಸಿದ್ದಾರೆ.