ಸುಳ್ಯ ನಗರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಗೋರಕ್ಷಾ ವಿಭಾಗದ ವತಿಯಿಂದ ಗೋಪೂಜಾ ಕಾರ್ಯಕ್ರಮ

0

ಗೋವಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ
ಶಾಸಕಿ ಕು. ಭಾಗೀರಥಿ ಮುರುಳ್ಯ

ಸುಳ್ಯ ನಗರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಗೋರಕ್ಷಾ ವಿಭಾಗದ ವತಿಯಿಂದ ಹಮ್ಮಿಕೊಂಡ ಸಾಮೂಹಿಕ ಗೋಪೂಜಾ ಕಾರ್ಯಕ್ರಮವು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನ.18 ರಂದು ಸಂಧ್ಯಾ ಕಾಲದಲ್ಲಿ ನಡೆಯಿತು.


ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಗೋವಿಗೆ ಆರತಿ ಬೆಳಗಿ ಪೂಜೆ ನೆರವೇರಿಸಿದರು.
ಶ್ರೀಮತಿ ಲತಾ ಮಧುಸೂಧನ ರವರು ದೀಪ ಪ್ರಜ್ವಲಿಸಿದರು.


ಬಳಿಕ ಅಜ್ಜಾವರ ಮಹಿಷಮರ್ಧಿನಿ ಭಜನಾ ಸಂಘ ಹಾಗೂ ಮಂಡೆಕೋಲು ಶ್ರೀ ಮಹಾವಿಷ್ಣು ಭಜನಾ ಸಂಘದ ಸದಸ್ಯರಿಂದ ಇವರಿಂದ ಆಕರ್ಷಕ ಕುಣಿತ ಭಜನೆಯು ಪ್ರದರ್ಶನವಾಯಿತು.
ಸಾರ್ವಜನಿಕರು ಗೋವುಗಳಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.