ಮಹಿಳಾ ಮಂಡಲಗಳ ಒಕ್ಕೂಟ ಮತ್ತು ಸುದ್ದಿ ಸಮೂಹ ಸಂಸ್ಥೆ ವತಿಯಿಂದ ಏರ್ಪಡಿಸಲಾದ ಮುದ್ದು ಕಂದ ಫೊಟೋ ಸ್ಪರ್ಧೆಯ ಬಹುಮಾನ ವಿತರಣೆ

0

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ಮುದ್ದು ಕಂದ ಫೊಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ನ. 23ರಂದು ಮಹಿಳಾ ಒಕ್ಕೂಟದ ಸಭಾಭವನದಲ್ಲಿ ನಡೆಯಿತು.

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ಬಹುಮಾನ ವಿತರಿಸಿದರು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಮುಖ್ಯ ಅತಿಥಿಯಾಗಿದ್ದರು.
ಮಹಿಳಾ ಮಂಡಲಗಳ ಒಕ್ಕೂಟದ ನಿರ್ದೇಶಕಿ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು ಸ್ವಾಗತಿಸಿ,ಕಾರ್ಯಕ್ರಮದ ಸಂಯೋಜಕಿ, ಒಕ್ಕೂಟದ ಕೋಶಾಧಿಕಾರಿ ಶ್ರೀಮತಿ ಚಂದ್ರಾಕ್ಷಿ ಜೆ.ರೈ ಪ್ರಸ್ತಾವನೆಗೈದರು. ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ.ಪ್ರಸಾದ್ ವಂದಿಸಿದರು.

ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಸುಮಾ ಸುಬ್ಬರಾವ್, ಮಹಾಲಕ್ಷ್ಮಿ ಕೊರಂಬಡ್ಕ, ಕಾರ್ಯದರ್ಶಿ ಶ್ರೀಮತಿ ಅನಿತಾ ಸುತ್ತುಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜೇತರು :
ತನಿಷ್ಕಾ ಎಂ.ಎಸ್. (ತಂದೆ: ಸನತ್‌ಕುಮಾರ್ ಮುಳುಗಾಡು – ತಾಯಿ : ಚಂಚಲಾಕ್ಷಿ) ಪ್ರಥಮ, ಆದ್ಯಾ ಎಸ್. ಗೌಡ (ತಂದೆ : ಶರತ್ ಎಸ್.ಯು.-ತಾಯಿ: ಡಯಾನಾ ಪಿ.ಎಂ.) ದ್ವಿತೀಯ, ಯುವಾಂಶ್ ಕೆ.ಪಿ. ( ವಿನೋದ್‌ಕುಮಾರ್ ಕೆ.ಯು.- ಸೌಮ್ಯ),ತೃತೀಯ
ಸಮಾಧಾನಕರ ಬಹುಮಾನಗಳು :
ಅದ್ರಿತಾ ರೈ ( ರತನ್‌ರಾಜ್ ಕೆ. – ಪ್ರತಿಮಾ ರೈ), ಬೃಥಿ ಕೆ.ಟಿ. (ಕೆ.ಟಿ.ಭಾಗೀಶ್ – ಚೈತ್ರಾ ಎ.ಪಿ.), ಸಾತ್ವಿ ಮುಂಡೋಡಿ (ಪ್ರಸನ್ನ ಎಂ.ಪಿ.- ಭವ್ಯಶ್ರೀ ಎ.ವಿ.), ಆರಾಧನಾ ಅರುಣ್ ಕೆ. (ಅರುಣ್ ಚಂದ್ರಶೇಖರ್ -ಜಯಶ್ರೀ ಕೆ.), ಐಸಿರಿ (ಮಿಥುನ್ ಕಡೆಂಗ-ಪ್ರಜ್ಞಾ ಯು.ಜೆ.),ಪೂರ್ವಿತ್ ಎ.ಬಿ. (ಭರತ್ ಎ.ಸಿ.- ದೀಪಿಕಾ ಎಂ.ಟಿ.), ಹನಿ ಪಿ.ಎಚ್. (ಹರ್ಷಿತ್ ಎ.,- ಚೈತ್ರಾ ಎ.), ಅದಿತ್ರಿ ಎಂ.ಟಿ. (ರವಿಪ್ರಸಾದ್ ಎಂ.ಆರ್. – ಸೌಮ್ಯ ಕೆ.), ಸಂಪ್ರೀತಿ ಭಟ್ ( ರಾಘವೇಂದ್ರ- ಸೌಮ್ಯ ಎಂ.ಎಸ್.).