ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದಿಂದ ಆಶಿತ್ ಕಮಿಲರಿಗೆ ಸನ್ಮಾನ

0

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ದ. ಕ. ಮತ್ತು ಉಡುಪಿ ಜಿಲ್ಲೆಯ ವಾರ್ಷಿಕ ಮಹಾಸಭೆಯ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಭಯ ಜಿಲ್ಲೆಗಳ ಸದಸ್ಯರ ಸಮ್ಮುಖದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಮಂಗಳೂರಿನಲ್ಲಿ ನೆಲೆಸಿರುವ ಗುತ್ತಿಗಾರಿನ ಕಮಿಲ ಪುರುಷೋತ್ತಮ ಮತ್ತು ಶ್ರೀಮತಿ ಹೇಮಲತಾ ದಂಪತಿಗಳ ಪುತ್ರ ಆಶಿತ್ ಪಿ. ಕಮಿಲ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅರವಿಂದ್ ಮೋಟಾರ್ಸ್ ನ ಮಾಲಕರಾದ ಆರೂರು ಕಿಶೋರ್ ರಾವ್, ಕಾರ್ಮಿಕ ಅಧಿಕಾರಿ ಶ್ರೀಮತಿ ವಿಲ್ಮಾ, ರಾಮದೇವ್ ಅಟೋ ಮೊಬೈಲ್ಸ್ ನ ಮಾಲಕರಾದ ಶೇರ್ ಸಿಂಗ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮ. ನ. ಪಾ . ಸದಸ್ಯ ಶೈಲೇಶ್ ಶೆಟ್ಟಿ, ಸರ್ವೋ ಆಯಿಲ್ ನ ಪಂಕಜ್ ಕುಮಾರ್, ಜಿಲ್ಲಾ ಸಂಘದ ಚೇಯರ್ ಮ್ಯಾನ್ ಪುಂಡಲೀಕ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ಧನ್ ಅತ್ತಾವರ, ಜಿಲ್ಲಾ ಸಂಘದ ಅಧ್ಯಕ್ಷರಾದ ಕಿಶೋರ್ ಕೇಶವ, ನಿರ್ದೇಶಕರಾದ ಎಂ. ದಿವಾಕರ್ ಉಪಸ್ಥಿತರಿದ್ದರು.