ಅಜ್ಜಾವರ : ವರಮಹ್ಲಾಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

0

ಅಜ್ಜಾವರ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಇದರ ೨೦೨೩-೨೪ನೇ ಸಾಲಿನ ಪದಗ್ರಹಣ ಮತ್ತು ಅಭಿನಂದನಾ ಕಾರ್ಯಕ್ರಮವು ನ.೩೦ರಂದು ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ ಬಯಂಬು ಅಜ್ಜಾವರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಮನೋರಮ ಪಡ್ಡಂಬೈಲು ವಹಿಸಿದ್ದರು. ವೇದಾವತಿ ಅಡ್ಪಂಗಾಯ, ಮೋಹಿನಿ ಅಜ್ಜಾವರ ಪ್ರಾರ್ಥಿಸಿದರು. ಶ್ರೀಮತಿ ಶ್ವೇತಾ ಶಿರಾಜೆ ವರದಿ ವಾಚಿಸಿದರು. ಕು. ಲಕ್ಷ್ಮಿ ಪಲ್ಲತಡ್ಕ ಲೆಕ್ಕಪತ್ರ ಮಂಡಿಸಿದರು.


ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸದಸ್ಯರಿಗೆ ಭಜನಾ ತರಬೇತಿ ನೀಡಿದ ಬಾಲಕೃಷ್ಣ ಪಿ.ಎಸ್. ರನ್ನು ಅಭಿನಂದಿಸಲಾಯಿತು. ಬಳಿಕ ೨೦೨೩-೨೪ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹರಿಣಾಕ್ಷಿ ಎಸ್ ರೈ ಬೇಲ್ಯ, ಕಾರ್ಯದರ್ಶಿ ವಿಶಾಲ ಕರ್ಲಪ್ಪಾಡಿ, ಕೋಶಾಧಿಕಾರಿ ರಮ್ಯ ಶಿರಾಜೆ, ಸಂಚಾಲಕರಾಗಿ ಸೀತಾಲಕ್ಷ್ಮಿ ಕರ್ಲಪ್ಪಾಡಿ, ಉಪಾಧ್ಯಕ್ಷರಾಗಿ ಚಂದ್ರಾವತಿ ಬಯಂಬು, ಜತೆ ಕಾರ್ಯದರ್ಶಿಯಾಗಿ ಪ್ರಿಯ ಶಿರಾಜೆ, ಭಜನ ಸಂಚಾಲಕರಾಗಿ ಶಶ್ಮಿ ಭಟ್ ಅಜ್ಜಾವರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಯಂಬು ಭಾಸ್ಕರ್ ರಾವ್, ಪೂಜಾ ಸಮಿತಿಯ ಗೌರವಾಧ್ಯಕ್ಷ ಕರುಣಾಕರ ಅಡ್ಪಂಗಾಯ, ಸಲಹಾ ಸಮಿತಿಯ ಸದಸ್ಯರುಗಳಾದ ಬಾಲಚಂದ್ರ ಮುಡೂರು, ಸೀತಾರಾಮ ಶಾಂತಿಮಜಲು, ನಾರಾಯಣ ಬಂಟ್ರಬೈಲು, ಬೆಳ್ಯಪ್ಪ ಮುಡೂರು, ಬಾಲಕೃಷ್ಣ ಪಿ.ಎಸ್., ಕಿಟ್ಟಣ್ಣ ರೈ ಇರಂತಮಜಲು, ಸ್ಥಾಪಕಾಧ್ಯಕ್ಷರಾದ ಜಯಂತಿ ಎನ್.ಜೆ. ಹಾಗೂ ಪೂಜಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಜನಾ ತರಬೇತಿ ಪಡೆದ ಪೂಜಾ ಸಮಿತಿಯ ಸದಸ್ಯರಿಂದ ಭಜನೆ ನಡೆಯಿತು. ಜಯಶ್ರೀ ಬೇಲ್ಯ ಸ್ವಾಗತಿಸಿದರು. ರಮ್ಯ ಶಿರಾಜೆ ವಂದಿಸಿದರು. ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.