ಬೂಡು ಭಗವತೀ ಯುವ ಸೇವಾ ಸಂಘದಿಂದ ಶ್ರಮದಾನ

0

ಸುಳ್ಯ ಬೂಡು – ಕೇರ್ಪಳ – ಕುರುಂಜಿಗುಡ್ಡೆ ಶ್ರೀ ಭಗವತಿ ಯುವ ಸೇವಾ ಸಂಘವು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ೨೦ನೇ ವರ್ಷದ ಶ್ರಮದಾನ ಹಾಗೂ ಶ್ರದ್ಧಾ ಕೇಂದ್ರ ಸ್ವಚ್ಛತಾ ಅಭಿಯಾನವು ಡಿ.೩ರಂದು ನಡೆಯಿತು.
ಬೂಡು ಭಗವತೀ ಕ್ಷೇತ್ರ ದ್ವಾರದ ಬಳಿಯಿಂದ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಭಗವತೀ ಯುವ ಸೇವಾ ಸಂಘದ ಹಿರಿಯರಾದ ವಿಠಲ ರೈ ಬೂಡು ತೆಂಗಿನಕಾಯಿ ಒಡೆಯುವುದರೊಂದಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಎಸ್ ನಡುಬೈಲು, ಕಾರ್ಯದರ್ಶಿ ವಾಸುದೇವ ನಾಯಕ್ ಅಂಗಡಿಮಠ ಸಹಿತ ೫೦ ಕ್ಕೂ ಅಧಿಕ ಮಂದಿ ಭಾಗವಹಿಸಿ ಶ್ರಮದಾನದಲ್ಲಿ ಭಾಗವಹಿಸಿದರು.


ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಪ್ರಕೃತಿ ಯುವಕ ಸಂಘ ಬೂಡು, ಬಜರಂಗದಳ ಸಂಘಟನೆ, ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಸಹಕಾರ ನೀಡಿದರು. ಭಗವತೀ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ, ವಂದಿಸಿದರು.