ಡಾ.ಕೆ.ವಿ.ಜಿ. ಸ್ಮರಣಾರ್ಥ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯಿಂದ ತಾಲೂಕಿನ 25 ಪ್ರೌಢ ಶಾಲೆಗಳಲ್ಲಿ ಕೆ.ವಿ.ಜಿ.ಸಾಧನೆ ಸಂಸ್ಮರಣೆ

0

ಡಾ.ಕುರುಂಜಿ ವೆಂಕಟ್ರಮಣ ಗೌಡರ 95 ನೇ ಹುಟ್ಟುಹಬ್ಬ ಪ್ರಯುಕ್ತ ಕೆ.ವಿ.ಜಿ. ಸುಳ್ಯ ಸುಳ್ಯ ಹಬ್ಬ ಸಮಿತಿ ವತಿಯಿಂದ ಕೆ.ವಿ.ಜಿ. ಸಾಧನೆ – ಸಂಸ್ಮರಣೆ ಕಾರ್ಯಕ್ರಮ ಸುಳ್ಯ ತಾಲೂಕಿನ 25 ಪ್ರೌಢ ಶಾಲೆಗಳಲ್ಲಿ ಇಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎನ್.ಎಂ.ಸಿ.ಯಲ್ಲಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ನೆರವೇರಿಸಿದರು.

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪೂರ್ವ ಪ್ರಾಂಶುಪಾಲ ಡಾ.ಎನ್.ಎ. ಜ್ಞಾನೇಶ್ ಕುರುಂಜಿಯವರ ಸಾಧನೆಗಳ ಬಗ್ಗೆ ವಿವರಿಸಿದರು. ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಖಜಾಂಚಿ ಜನಾರ್ದನ್ ನಾಯ್ಕ್, ಉಪನ್ಯಾಸಕಿ ಶ್ರೀಮತಿ ರತ್ನಾವತಿ ಉಪಸ್ಥಿತರಿದ್ದರು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿನಿ ಕುರುಂಜಿಯವರ ಕುರಿತು ಮಾತನಾಡಿದರು.
ಪ್ರೊ.ರತ್ನಾವತಿ ಸ್ವಾಗತಿಸಿ, ಚಂದ್ರಶೇಖರ ಪೇರಾಲು ವಂದಿಸಿದರು. ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.